ದಾಸನಾಳ ಗ್ರಾಮದ ಕಾಟಮೇಶ್ವರ ದೇವರ ೧೬ನೇ ವರ್ಷದ ಜಾತ್ರಾ ಮಹೋತ್ಸವ, ಪೂಜ್ಯ ಶ್ರೀ ರೇಣುಕಾನಂದ ಮಹಾಸ್ವಾಮಿಗಳ ೧೪ನೇ ವರ್ಷದ ತುಲಾಭಾರ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮಗಳು
ಗಂಗಾವತಿ: ತಾಲೂಕಿನ ದಾಸನಾಳ ಗ್ರಾಮದಲ್ಲಿ ನಡೆದ ಕಾಟಮೇಶ್ವರ ದೇವರ 16ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಪೂಜ್ಯ ಶ್ರೀ ರೇಣುಕಾನಂದ ಮಹಾಸ್ವಾಮಿಗಳ ೧೪ನೇ ವರ್ಷದ ತುಲಾಭಾರ ಕಾರ್ಯಕ್ರಮ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ವಿಧಾನ ಪರಿಷತ್ ಸದಸ್ಯರಾದ ಹೆಚ್.ಆರ್.ಶ್ರೀನಾಥರವರು ಯಾವುದೇ ಸಮುದಾಯದ ಅಭಿವೃದ್ಧಿಗೆ, ಪ್ರಗತಿಗೆ, ಅವರ ಕುಲದೇವರ ಅನುಗ್ರಹ ತುಂಬಾ ಅವಶ್ಯವಾಗಿದೆ. ಅದರಂತೆ ಕುಲ ಗುರುಗಳ ಮಾರ್ಗದರ್ಶನ, ಅವರ ಆಶೀರ್ವಾದವಿದ್ದಲ್ಲಿ ಸಮಾಜವು ಪ್ರಗತಿಯ ಕಡೆಗೆ ಸಾಗಲು ಸಾಧ್ಯ ಎಂದರು. ಸಮಾಜದ ಎಲ್ಲ ಬಂಧುಗಳು…
