ಎಸ್.ಎಲ್ ಭೈರಪ್ಪನವರಿಗೆ ಅ.ಭಾ.ಸಾ.ಪ ವತಿಯಿಂದ ನುಡಿನಮನ
ಗಂಗಾವತಿ: ಸೆಪ್ಟೆಂಬರ್-೨೪ ಮಧ್ಯಾಹ್ನ ೨:೩೦ ಗಂಟೆಗೆ ಬೆಂಗಳೂರಲ್ಲಿ ದೈವಾಧೀನರಾದ ಕರುನಾಡಿನ ಹಿರಿಯ ಖ್ಯಾತ ಸಾಹಿತಿ, ಕಾದಂಬರಿಕಾರ, ಪದ್ಮಭೂಷಣ ಶ್ರೀಯುತ ಎಸ್.ಎಲ್ ಭೈರಪ್ಪನವರಿಗೆ ಇಂದು ಸೆಪ್ಟೆಂಬರ್-೨೫ ರಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ವತಿಯಿಂದ ಶ್ರದ್ದಾಂಜಲಿ ಹಾಗೂ ನುಡಿ ನಮನವನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಅಶೋಕ್ ಕುಮಾರ್ ರಾಯ್ಕರ್ ಮಾತನಾಡುತ್ತಾ ಒಬ್ಬ ಯುಗ ಪ್ರವರ್ತಕರಂತೆ ಹೊಸ ವೈಚಾರಿಕ ಜಗತ್ತಿನ ಸೃಷ್ಟಿಸಿ ಯುವ ಸಾಹಿತಿಗಳಿಗೆ ಭೈರಪ್ಪನವರು ಪ್ರೇರಣೆಯೆಂದು ಕೊಂಡಾಡಿದರು. ಯುವ ಸಾಹಿತಿಗಳು ಅವರ ಕಾದಂಬರಿ ವಿಮರ್ಶೆ…
