ಸಂಗೀತವೇ ನನ್ನ ಉಸಿರು – ನಾಗರಕಟ್ಟೆಯ ಗಾನಕೋಗಿಲೆ ಸಿ. ಹನುಮಂತನಾಯ್ಕ

ಕಳೆದ 12 ವರ್ಷಗಳಿಂದ ದಾವಣಗೆರೆಯಲ್ಲಿ ನಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದೇನೆ.

ಜಾನಪದ ಗೀತೆ ವೈಯಕ್ತಿಕ ಮತ್ತು ಸಮೂಹ ಗಾಯನ ವಿಭಾಗದಲ್ಲಿ ಪ್ರಥಮ ಬಹುಮಾನ ಗಳಿಸಿದ್ದು, ಹಿಂದೂಸ್ತಾನಿ ಲಘು ಸಂಗೀತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದೇನೆ.

ಕರ್ನಾಟಕ ಶಾಸ್ತ್ರೀಯ ಲಘು ಸಂಗೀತದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಕಲಾ ಪ್ರೀತಿಗೆ ಮತ್ತಷ್ಟು ಬೆಳಕು ಹರಿಸಿದ್ದೇನೆ.

ಇಂತಹ ವೈವಿಧ್ಯಮಯ ಪ್ರತಿಭೆ ಹೊಂದಿರುವ ವ್ಯಕ್ತಿ ನಾಗರಕಟ್ಟೆಯ ಸಿ. ಹನುಮಂತನಾಯ್ಕ, ಪ್ರಸ್ತುತ ದಾವಣಗೆರೆಯ ದುಗ್ಗಮ್ಮಪೇಟೆಯ ಸರ್ಕಾರಿ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿದ್ದಾರೆ.

ಇವರು ಮೂರು ಬಾರಿ ರಾಜ್ಯ ಪ್ರಶಸ್ತಿ ಪಡೆದಿರುವುದರ ಜೊತೆಗೆ ಅಂಗವಿಕಲರ ರಾಜ್ಯ ಮಟ್ಟದ ಪ್ರಬಂಧ ಹಾಗೂ ಗಾಯನ ಸ್ಪರ್ಧೆಯಲ್ಲಿಯೂ ಪ್ರಥಮ ಸ್ಥಾನ ಪಡೆದಿದ್ದಾರೆ.

ಹುಟ್ಟಿದ 14 ತಿಂಗಳ ನಂತರ ಪೋಲಿಯೋ ರೋಗದಿಂದ ವಿಕಲಚೇತನರಾದ ಇವರು ತಂದೆ ಚಂದ್ರನಾಯ್ಕ ಅವರಿಂದ ಪ್ರೇರಣೆಯುಂಟಾಯಿತು ಎಂದು ಕೃತಜ್ಞತಾಪೂರ್ವಕವಾಗಿ ನೆನಪಿಸುತ್ತಾರೆ.

ತಾಯಿ ಪುಟ್ಟಿಬಾಯಿ, ಪತ್ನಿ ಪವಿತ್ರಾ, ಮಗ ವಿಕ್ರಮ್ ನಾಯ್ಕ ಹಾಗೂ ಮಗಳು ದ್ರುವೀಕ ಅವರ ಪ್ರೀತಿಯ ಕುಟುಂಬವಾಗಿದೆ.

ಇವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ನಾಗರಕಟ್ಟೆಯಲ್ಲಿಯೇ ಮುಗಿಸಿ, ದಾವಣಗೆರೆಯ ಮೋತಿಯಪ್ಪ ಕಾಲೇಜಿನಲ್ಲಿ ಪಿಯುಸಿ ಪೂರ್ಣಗೊಳಿಸಿದರು.

ಡಿ.ಎಡ್ ತರಬೇತಿಯನ್ನು ತುಮಕೂರಿನ ಚಿಕ್ಕನಹಳ್ಳಿ ಸರ್ಕಾರಿ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಪಡೆದು, ಧಾರವಾಡದಿಂದ ಬಿಎ, ಇಗ್ನೋದಿಂದ ಬಿ.ಎಡ್ ಮಾಡಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ ಪದವಿಯನ್ನು ಪಡೆದಿರುವ ಇವರು, 2010ರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಶಿಕ್ಷಕರ ಹುದ್ದೆಗೆ ಆಯ್ಕೆಯಾದರು.

ಬಾಲ್ಯದಲ್ಲಿಯೇ ತಂದೆ ಹಾಡುತ್ತಿದ್ದ ಲಾವಣಿ, ಕೋಲಾಟ, ಭಜನೆ ಪದಗಳು ಇವರಿಗೆ ಸಂಗೀತದ ಪ್ರೇರಣೆಯಾಗಿದ್ದು, 4ನೇ ತರಗತಿಯಿಂದ ಹಾಡುಗಳನ್ನು ಹಾಡತೊಡಗಿದರು.

ಇವರೆಲ್ಲಾ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ 130ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗಳಿಸಿರುವ ಗಾನಕೋಗಿಲೆ. ಅವರಿಗೆ ‘ಕಲಾ ವಿಭೂಷಣ’, ‘ಶಿಕ್ಷಣ ಸೌರಭ’ ಪ್ರಶಸ್ತಿಗಳು ಲಭಿಸಿವೆ.

ಇವರ ಮತ್ತೊಂದು ವಿಶೇಷತೆ ಎಂದರೆ ಗಂಡು ಹಾಗೂ ಹೆಣ್ಣು ಧ್ವನಿಯಲ್ಲಿ ಹಾಡಬಹುದಾದ ಅಪರೂಪದ ಪ್ರತಿಭೆ. ಮಕ್ಕಳಿಗೂ ಈ ಕಲೆಯನ್ನು ಧಾರೆಯೆರೆಯುತ್ತಿದ್ದಾರೆ.

ಕೊರೊನಾ ಸಂದರ್ಭದಲ್ಲಿ ತ್ರಿಚಕ್ರ ವಾಹನದಲ್ಲಿ ಆಹಾರ ಪೊಟ್ಟಣಗಳನ್ನು ವಿತರಿಸುವ ಮೂಲಕ ಇವರು ಸಾಮಾಜಿಕ ಕಳಕಳಿಯನ್ನು ಸಹ ವ್ಯಕ್ತಪಡಿಸಿದ್ದಾರೆ.

ಇವರು ಕರ್ನಾಟಕ ರಾಜ್ಯ ಬರಹಗಾರರ ಸಂಘದ (ರಿ.) ಹೂವಿನಹಡಗಲಿ ಘಟಕದ ಅಧ್ಯಕ್ಷ ಮಧುನಾಯ್ಕ್ ಲಂಬಾಣಿ ಅವರು ಆಯೋಜಿಸಿದ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಚಿಕ್ಕಮಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಗಾಯನ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಹಾಡಿ “ಕರ್ನಾಟಕ ಕರುನಾಡ ಕೋಗಿಲೆ” ಪ್ರಶಸ್ತಿಗೆ ಪಾತ್ರರಾದರು.

ಈ ಕಾರ್ಯಕ್ರಮದಲ್ಲಿ ಅವರು ಹಾಡಿದ ಕರೋಕೆ ಗೀತೆಯನ್ನು ತೀರ್ಪುಗಾರನಾಗಿ ನಾನು ಆಲಿಸಿದ್ದು, ಅವರ ಸಾಮೂಹಿಕ ನಾಡಗೀತೆ ವಿಶೇಷವಾಗಿ ಗಮನಸೆಳೆದಿತು.

“ಹತ್ತನೇ ವಯಸ್ಸಿನಿಂದಲೇ ನಾನು ಜಾನಪದ, ಭಾವಗೀತೆ, ಲಾವಣಿ, ಚಿತ್ರಗೀತೆಗಳನ್ನೇ ಹಾಡುತ್ತಾ ಕಲಿಸುತ್ತಾ ಬಂದಿದ್ದೇನೆ ಸಾರ್,” ಎನ್ನುತ್ತಾರೆ ಅವರು.

“ನಮ್ಮ ಶಾಲೆಯ ಎರಡನೇ ತರಗತಿಯ ಮಕ್ಕಳು ನಾಡಗೀತೆಗಳನ್ನು ಕರೋಕೆಯೊಂದಿಗೆ ತುಂಬಾ ಸೊಗಸಾಗಿ ಹಾಡುತ್ತಾರೆ ಸಾರ್,” ಎಂದು ಸಂತೋಷದಿಂದ ಹೇಳುತ್ತಾರೆ.

“ವಿಕಲಚೇತನ ಎಂದು ಕೆಲವೊಮ್ಮೆ ಮನಸ್ಸಿಗೆ ನೋವಾಗುತ್ತದೆ. ಆಗ ಎರಡು ಹಾಡುಗಳನ್ನು ಹಾಡಿ ತೃಪ್ತಿಪಟ್ಟುಕೊಳ್ಳುತ್ತೇನೆ,” ಎನ್ನುತ್ತಾರೆ ಅವರು ಭಾವೋದ್ರೇಕದಿಂದ.

“ನನ್ನ ಮನಸ್ಸು, ಹೃದಯ ಹರ್ಷಗೊಳ್ಳುತ್ತದೆ. ನೋವು ಮರೆತುಹೋಗುತ್ತದೆ. ನಿಜಕ್ಕೂ ಸಂಗೀತವೇ ನನ್ನ ಉಸಿರು,” ಎಂದು ಕಣ್ಣೀರಿನಿಂದ ಅನುಭವಗಳನ್ನು ಹಂಚಿಕೊಳ್ಳುತ್ತಾರೆ.

ಗೊರೂರು ಅನಂತರಾಜು, ಹಾಸನ.
9449462879
ವಿಳಾಸ :ಹುಣಸಿನಕೆರೆ ಬಡಾವಣೆ,
29ನೇ ವಾಡ್೬, 3ನೇ ಕ್ರಾಸ್,
ಶ್ರೀ ಶನೀಶ್ವರ ದೇವಸ್ಥಾನ ರಸ್ತೆ,
ಹಾಸನ-573201

ಸಾರ್, ನನಗೆ ಹಾಡುವುದೆಂದರೆ ತುಂಬಾ ಇಷ್ಟ.ನಾನು ಅಶ್ವಿನಿ ಹರೀಶ್

ನನ್ನ ಹೆಸರು ಅಶ್ವಿನಿ ಹರೀಶ್. ನಾನು 25-4-1984 ರಂದು ಹೊನ್ನವಳ್ಳಿಯಲ್ಲಿ ಜನಿಸಿದ್ದೇನೆ. ಈ ಊರು ಚಲನಚಿತ್ರ ಹಾಸ್ಯನಟ ಹೊನ್ನವಳ್ಳಿ ಕೃಷ್ಣ ಅವರ ಹುಟ್ಟೂರು.

ನನ್ನ ತಂದೆ-ತಾಯಿಗೆ ಎಂಟು ಮಂದಿ ಮಕ್ಕಳಿದ್ದು, ನಾನು ಏಳನೇ ಸ್ಥಾನದಲ್ಲಿದ್ದೇನೆ. ನಾನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಗೂ ಹೇಮಾವತಿ ಪ್ರೌಢಶಾಲೆಯಲ್ಲಿ 10ನೇ ತರಗತಿವರೆಗೆ ಓದಿದ್ದೇನೆ.

ಚಿಕ್ಕಂದಿನಿಂದಲೇ ನನಗೆ ಹಾಡು ಹಾಡುವುದು ಬಹಳ ಇಷ್ಟವಾಗಿತ್ತು. ಶಾಲಾ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಿ ಬಹುಮಾನಗಳನ್ನು ಗಳಿಸಿದ್ದೆ.

ಹೊಲದ ಹತ್ತಿರ ಕೆಲಸ ಮಾಡುವಾಗ ದನ ಮೇಯಿಸುವಾಗ ನನಗೆ ನಾನೇ ಹಾಡಿಕೊಳ್ಳುತ್ತಿದೆ. ಮನೆಯಲ್ಲಿ ಕೆಲಸ ಮಾಡುವಾಗಲು ಪಾತ್ರೆ ತೊಳೆಯುವಾಗಲು ಮನೆ ಸಾರಿಸುವಾಗಲೂ ಹಾಡು ಹೇಳುತ್ತಲೇ ಇದ್ದೆ.

ಪಿಯುಸಿ ವಿದ್ಯಾಭ್ಯಾಸಕ್ಕಾಗಿ ಅರಕಲಗೂಡು ಬಾಲಕಿಯರ ಪದವಿಪೂರ್ವ ಕಾಲೇಜಿಗೆ ಸೇರಿದ್ದೆ. ಆದರೆ ಆ ವೇಳೆ ನನ್ನ ತಂದೆ ನಿಧನರಾದರು.

ಕುಟುಂಬದ ಆರ್ಥಿಕ ತೊಂದರೆಗಳಿಂದಾಗಿ ವಿದ್ಯಾಭ್ಯಾಸ ಮುಂದುವರಿಯಲಿಲ್ಲ. ಆದರೂ ನಾನು ಹಾಡು ಹೋದ ಹಾದಿಯನ್ನು ತೊರೆದಿಲ್ಲ.

2006 ರಲ್ಲಿ “ಈ ಟಿವಿಯ ಹಾಡಿಗೊಂದು ಹಾಡು” ಕಾರ್ಯಕ್ರಮದ ಆಡಿಶನ್‌ ನಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪಡೆದಿದ್ದೆ.

ಈ ಕಾರ್ಯಕ್ರಮದಲ್ಲಿ ಪ್ರಸಿದ್ಧ ಗಾಯಕಿ ಬಿ.ಆರ್. ಛಾಯ ಮತ್ತು ರವಿಶಂಕರ್ ಜ್ಯೂರಿಯಾಗಿ ಭಾಗವಹಿಸಿದ್ದರು.

ಅರಕಲಗೂಡಿಗೆ ಮನೆ ಬದಲಾಯಿಸಿದ ನಂತರ, ಜನಪದ ಕಲಾವಿದ ದೇವಾನಂದ್ ವರಪ್ರಸಾದ್ ಅವರು ಬೇಸಿಗೆ ಶಿಬಿರ ಆಯೋಜಿಸಿದ್ದರು.

ಅವರಿಗೆ ನನ್ನ ಮಗಳನ್ನು ಸೇರಿಸಲು ಹೋಗಿ ನನ್ನಲ್ಲಿದ್ದ ಗಾಯನ ಆಸಕ್ತಿಯನ್ನು ನೋಡಿ, ಅವರಿಗೆ ಹಾಡಲು ಅವಕಾಶ ನೀಡಿದರು.

ಮೈಸೂರು ದಸರಾ, ಕೋಟಿ ಕಂಠ ಗೀತೆ, YESHTEL ಟಿವಿ ಕಾರ್ಯಕ್ರಮಗಳಲ್ಲಿ ಜನಪದ ಗೀತೆಗಳನ್ನು ಹಾಡಿದ್ದೇನೆ.

ಮೈಸೂರು ಕಿರು ರಂಗಮಂದಿರದ ಜಾನಪದ ಹಬ್ಬದಲ್ಲಿ ‘ಸೋಜಿಗಾದ ಸೂಜುಮಲ್ಲಿಗೆ’ ಹಾಡು ಹಾಡಿ ಶ್ರೋತೃಗಳ ಮನಗೆದ್ದಿದ್ದೆ.

ದೇವಾನಂದ್ ಅವರ ಸಂಗೀತ ಸಂಯೋಜನೆಯಲ್ಲಿ “ದೂರದ ಬೆಟ್ಟ ನುಣ್ಣಗೆ” ಎಂಬ ನಾಟಕದಲ್ಲಿ ನಾನು ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದೆ.

ಸೋಬಾನೆ, ರಾಗಿ ಬೀಸೋ ಪದಗಳ ತರಬೇತಿ ಅವರು ನೀಡಿದರು. ಅವರ ಮಾರ್ಗದರ್ಶನದಿಂದ ನಾನು ಹೊಸ ಶೈಲಿಗಳನ್ನು ಕಲಿತೆ.

ಶೇಖರ್ ಅವರು ನನ್ನ ಚಲನಚಿತ್ರ ಗೀತೆಗಳ ಗಾಯನದ ಶೈಲಿಗೆ ಮಾರ್ಗದರ್ಶನ ನೀಡಿದ್ದಾರೆ. ಕರೋಕೆ ಪಾಠ ಕಲಿಸಿದ್ದಾರೆ.

ಅವರು ಆಯೋಜಿಸಿದ್ದ “ಸ್ವರ ಸಂಭ್ರಮ” ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಿ ಬಹುಮಾನ ಹಾಗೂ ಸ್ಮರಣಿಕೆಗಳನ್ನು ಗಳಿಸಿದ್ದೆ.

ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಯೂತ್ ಮೇಳದಲ್ಲಿ ಜಿಲ್ಲಾ ಮಟ್ಟ, ವಿಭಾಗ ಮಟ್ಟ ಜಯಗಳಿಸಿ, ರಾಜ್ಯ ಮಟ್ಟಕ್ಕೆ ಆಯ್ಕೆಯಾದೆ.

ಆದರೆ ಕೋವಿಡ್ ಕಾರಣದಿಂದ ಭಾಗವಹಿಸಲು ಸಾಧ್ಯವಾಗಲಿಲ್ಲ. ಇದು ನನ್ನ ಸಂಗೀತ ಪಯಣದಲ್ಲಿ ಒಂದು ನಿರಾಸೆಯ ಹಂತವಾಯಿತು.

‘ಲಹರಿ’ ಎಂಬ ತಂಡವನ್ನು ತಯಾರಿಸಿ ವಿವಿಧ ಹಬ್ಬಗಳಲ್ಲಿ ಭಾಗವಹಿಸಿದ್ದೆ. ಹಳ್ಳಿ ಸಂಸ್ಕೃತಿ ಹಬ್ಬದಲ್ಲಿ ನನ್ನ ಮಗಳು ಹಾಗೂ ಮಕ್ಕಳು ಸೇರಿಕೊಂಡಿದ್ದೆವು.

ಅಲ್ಲಿ ಭಜನೆ, ನೃತ್ಯ, ಜನಪದ ಗೀತೆಗಳು, ಆರತಿ ಶಾಸ್ತ್ರದ ಹಾಡುಗಳೊಂದಿಗೆ ಪ್ರಥಮ ದ್ವಿತೀಯ ಬಹುಮಾನ ಗಳಿಸಿದ್ದೆವು.

ಅರಕಲಗೂಡು ದಸರಾ, ಗಣೇಶೋತ್ಸವ, ಶಿಕ್ಷಕರ ದಿನಾಚರಣೆಯಲ್ಲಿ ನಮ್ಮ ತಂಡದಿಂದ ಹಾಡುಗಳನ್ನು ಪ್ರಸ್ತುತಪಡಿಸಿದ್ದೆವು.

ಹಾಸನ ಜಿಲ್ಲೆಯ ಬರಹಗಾರರ ಸಂಘದ ಅಧ್ಯಕ್ಷ ಸುಂದರೇಶ್ ಡಿ. ಉಡುವಾರೆ ಅವರು ಕರೀಂಖಾನ್ ಪ್ರಶಸ್ತಿ ನೀಡಿ ಗೌರವಿಸಿದರು.

ಕರ್ನಾಟಕ ಬರಹಗಾರರ ಸಂಘದ ರಾಜ್ಯಾಧ್ಯಕ್ಷ ಮಧು ನಾಯಕ್ ಲಂಬಾಣಿ ಅವರು ನಡೆಸಿದ ಆನ್‌ಲೈನ್ ಸ್ಪರ್ಧೆಯಲ್ಲಿ ಆಯ್ಕೆಯಾಗಿ ಗೌರವ ಪಡೆದೆ.

2024ರ ಶಿವಮೊಗ್ಗ “ಕನ್ನಡ ನುಡಿ ವೈಭವ” ಕಾರ್ಯಕ್ರಮದಲ್ಲಿ ನನಗೆ ‘ಗಾನಕೋಗಿಲೆ’ ಪ್ರಶಸ್ತಿ ನೀಡಿ ಸನ್ಮಾನಿಸಿದರು.

ಗೊರೂರು ಅನಂತರಾಜು, ಹಾಸನ.
9449462879
ವಿಳಾಸ: ಹುಣಸಿನಕೆರೆ ಬಡಾವಣೆ,
29ನೇ ವಾರ್ಡ್, 3 ನೇ ಕ್ರಾಸ್,
ಶ್ರೀ ಶನೈಶ್ಚರ ದೇವಸ್ಥಾನ ರಸ್ತೆ,
ಹಾಸನ-573201

ಮನಸೆಳೆದ ರಾಜ್ಯಮಟ್ಟದ ಗಾಯನ ಸ್ಫರ್ಧೆ ಕರ್ನಾಟಕ ರಾಜ್ಯ ಬರಹಗಾರರ ಸಂಘದ ಕಾರ್ಯಕ್ರಮಕ್ಕೆ ಪ್ರಶಂಸೆ

ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನಹಡಗಲಿ ಘಟಕ ಮತ್ತು ಚಿಕ್ಕಮಗಳೂರು ಜಿಲ್ಲಾ ಘಟಕದ ಸಹಯೋಗದಲ್ಲಿ ರಾಜ್ಯಮಟ್ಟದ ಗಾಯನ ಸ್ಪರ್ಧೆ ಆಯೋಜಿಸಲಾಯಿತು.

ಈ ಕಾರ್ಯಕ್ರಮ ಭಾನುವಾರ ಚಿಕ್ಕಮಗಳೂರಿನ ಕನ್ನಡ ಭವನದಲ್ಲಿ ನಡೆಯಿತು, ಮತ್ತು ನೆರೆದ ಪ್ರೇಕ್ಷಕರ ಮನಸೆಳೆದು ಪ್ರಶಂಸೆಗೆ ಪಾತ್ರವಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹೂವಿನಹಡಗಲಿ ಘಟಕದ ಅಧ್ಯಕ್ಷ ಮಧುನಾಯ್ಕ ಲಂಬಾಣಿ, ಸಂಘದ ಉದ್ದೇಶಗಳನ್ನು ವಿವರಿಸಿದರು.

ಸಂಘವು ಪ್ರತೀ ಭಾನುವಾರ ಆನ್‌ಲೈನ್‌ನಲ್ಲಿ ವಿವಿಧ ಹಾಡುಗಳ ಸ್ಪರ್ಧೆಗಳನ್ನು ನಡೆಸಿ ಪ್ರತಿಭಾನ್ವಿತರಿಗೆ ವೇದಿಕೆ ಒದಗಿಸುತ್ತಿದೆ.

ಈ ಸ್ಪರ್ಧೆಗಳ ಪ್ರಥಮ ಹಂತದಲ್ಲಿ ೩೪ ಮಂದಿ ಗಾಯಕರನ್ನು ಆಯ್ಕೆ ಮಾಡಿ ಚಿಕ್ಕಮಗಳೂರಿಗೆ ಆಹ್ವಾನಿಸಲಾಗಿತ್ತು.

ಅವರು ವೇದಿಕೆಯಲ್ಲಿ ಹಾಡುಗಳನ್ನು ಪ್ರಸ್ತುತಪಡಿಸಿದ್ದು, ಪ್ರತಿಯೊಬ್ಬರಿಗೂ ಪ್ರಶಸ್ತಿ ನೀಡಲಾಯಿತು ಎಂದು ಅವರು ಹೇಳಿದರು.

ಇದಲ್ಲದೆ ದಾಂಡೆಲಿಯಲ್ಲಿ ೨ನೇ ಹಂತದ ಸ್ಪರ್ಧೆ ನಡೆಯಲಿದ್ದು, ಆಯ್ಕೆಯಾದ ಶ್ರೇಷ್ಠ ಗಾಯಕರಿಗೆ ಮುಂದಿನ ವರ್ಷ ಸನ್ಮಾನವಿದೆ.

ಜನವರಿಯಲ್ಲಿ ಬೆಳಗಾವಿಯಲ್ಲಿ ನಡೆಯುವ ಕನ್ನಡ ನುಡಿವೈಭವ ಕಾರ್ಯಕ್ರಮದಲ್ಲಿ ಇವರಿಗೆ ಗೌರವ ನೀಡಲಾಗುವುದು ಎಂದು ತಿಳಿಸಿದರು.

ಸಂಘವು 2020ರಲ್ಲಿ ಸ್ಥಾಪನೆಯಾಗಿ ಸಾಹಿತ್ಯ, ಸಂಸ್ಕೃತಿಕ, ಕೃಷಿ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದೆ.

ಕೊರೋನಾ ಸಮಯದಲ್ಲಿ ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ, ವೈದ್ಯಕೀಯ ಸಲಹೆ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗಿದೆ.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಸಂಘದ ಘಟಕಗಳು ಸ್ಥಾಪನೆಯಾಗಿವೆ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿವೆ.

ತೀರ್ಪುಗಾರರಾಗಿ ಭಾಗವಹಿಸಿದ ಸಾಹಿತಿ ಗೊರೂರು ಅನಂತರಾಜು, ಗಾಯಕರು ಕವಿಗಳು ಮತ್ತು ಶ್ರೋತೃಗಳ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಾರೆ ಎಂದರು.

ಹಾಡು ಮತ್ತು ಸಂಗೀತವು ಸಮಾಜದ ಆರೋಗ್ಯಕರ ಮನೋಭಾವನೆಗೆ ಸಹಾಯಮಾಡುವ ದಿವ್ಯ ಔಷಧಿಯಂತೆ ಕೆಲಸಮಾಡುತ್ತದೆ ಎಂದು ಅಭಿಪ್ರಾಯಪಟ್ಟರು.

ಚಿಕ್ಕಮಗಳೂರು ಘಟಕದ ಅಧ್ಯಕ್ಷ ಡಾ. ವಿದ್ಯಾ ಕೆ. ಅಧ್ಯಕ್ಷತೆ ವಹಿಸಿದ್ದರು ಮತ್ತು ಉತ್ತಮ ಆಯ್ಕೆ ಪ್ರಕ್ರಿಯೆಗೆ ಪ್ರಶಂಸೆ ವ್ಯಕ್ತವಾಯಿತು. ಘಟಕದ ಕಾರ್ಯದರ್ಶಿ ವಿಜಯಕುಮಾರ್ ಸಿ.ಆರ್. ತಾಳ್ಮೆಯಿಂದ ಗಾಯಕರ ಆಯ್ಕೆ ಮಾಡಿ ಶ್ಲಾಘನೀಯ ಕೆಲಸ ಮಾಡಿದ್ದಾರೆ.

ಕುರುವಂಜಿ ಕೆ.ಪಿ. ವೆಂಕಟೇಶ್ ಅವರು ಮಾಜಿ ರಾಜ್ಯಾಧ್ಯಕ್ಷರಾಗಿದ್ದು, ಸಫಾಯಿ ಕರ್ಮಚಾರಿ ನಿಗಮ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದಾರೆ.

ಬಿ.ಎಲ್. ಪ್ರವೀಣ್ ಬೆಟ್ಟಗೇರಿ, ಜಯಣ್ಣ ಹಾಗೂ ಎಂ.ಎಸ್. ನಾಗರಾಜ್ ಅವರು ಕಾರ್ಯಕ್ರಮದ ಗೌರವಾಧ್ಯಕ್ಷರಾಗಿ ಪಾಲ್ಗೊಂಡಿದ್ದರು. ಎಚ್.ಎಂ. ಜಗದೀಶ್ ಉಪಾಧ್ಯಕ್ಷರಾಗಿ, ಹಸೈನಾರ್ ಬೆಳಗೊಳ ಜಿಲ್ಲಾ ಕೋಶಾಧ್ಯಕ್ಷರಾಗಿ ತಮ್ಮ ಶ್ರದ್ಧಾಭಕ್ತಿಯ ಸೇವೆ ಸಲ್ಲಿಸಿದರು.

ರಾಕೇಶ್ ಸಿಂಗ್ ಅವರು ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಚಿಕ್ಕಮಗಳೂರು ತಾಲ್ಲೂಕು ಘಟಕದ ಅಧ್ಯಕ್ಷರು ವಿಜಯಕುಮಾರ್ ಎಚ್.ಸಿ. ಆಗಿದ್ದರು.

ಮೂಡಿಗೆರೆ ತಾಲ್ಲೂಕಿನ ಘಟಕ ಅಧ್ಯಕ್ಷರು ಮಂಜುನಾಥ ಬೆಟ್ಟಗೆರೆ, ಸಲಹೆಗಾರರಾಗಿದ್ದು ವಿನೋದ್ ಗೌರವ ನೀಡಿದರು.

ಇಂಪಾ ನಾಗರಾಜ್ ಅವರು ಗೌರವ ಕಾರ್ಯದರ್ಶಿಯಾಗಿ, ನವೀನ್ ಬಿ.ಆರ್. ಹಾಗೂ ರವಿ ಕುನ್ನಳ್ಳಿ ಅವರು ಗೌರವ ಸಲಹೆಗಾರರಾಗಿದ್ದರು.

ಮಧುಚಂದ್ರ ಹಾಗೂ ಮಜಾಭಾರತ ಕಲಾವಿದರು ತಮ್ಮ ಕಲಾ ಪ್ರದರ್ಶನದಿಂದ ಪ್ರೇಕ್ಷಕರನ್ನು ಮನಮೆಚ್ಚಿಸಿದರು.

ರಮೇಶ ಯಾದವ್ ಅವರು ಕಾಮಿಡಿ ಕಿಲಾಡಿಗಳ ತಂಡದ ಕಲಾವಿದರಾಗಿದ್ದು, ಮನರಂಜನೆ ಮೂಲಕ ಸಭಿಕರನ್ನು ಆಕರ್ಷಿಸಿದರು.

ಮುಖ್ಯ ಅತಿಥಿಗಳಾಗಿ ಕರ್ನಾಟಕದ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿವಿಧ ಜಿಲ್ಲೆಗಳ ಪ್ರಮುಖರು, ಕಲಾವಿದರು, ಹಾಗೂ ಮಾಧ್ಯಮದ ವ್ಯಕ್ತಿಗಳು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದರು.

ರಾಜ್ಯಮಟ್ಟದ ಗಾಯನ ಸ್ಪರ್ಧೆಯಲ್ಲಿ ಆಯ್ಕೆಯಾದ ಗಾಯಕ-ಗಾಯಕಿಯರಿಗೆ “ಕರುನಾಡು ಕೋಗಿಲೆ” ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಈ ಮೂಲಕ ಸಾಹಿತ್ಯ-ಸಂಸ್ಕೃತಿಯ ಬೆಳವಣಿಗೆಗೆ ಸಂಘವು ಪ್ರಭಾವಶಾಲಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದು ಸ್ಪಷ್ಟವಾಯಿತು.

ಪತ್ರಕರ್ತ ಹೆಚ್. ಮಲ್ಲಿಕಾರ್ಜುನ ರವರಿಗೆ ಮಾಧ್ಯಮ ಶ್ರೀ ಪ್ರಶಸ್ತಿ

ಗಂಗಾವತಿ: ಹಿರಿಯ ಪತ್ರಕರ್ತರು ಹಾಗೂ ಕಲ್ಯಾಣಸಿರಿ ಪತ್ರಿಕೆಯ ಸಂಪಾದಕರಾದ ಹೊಸಕೇರಾ ಮಲ್ಲಿಕಾರ್ಜುನರವರು ಮಾಧ್ಯಮ ಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘವು ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಿದ್ದು, ಜುಲೈ-೩೧ ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ರಾಜ್ಯ ಸಂಘದ ಉದ್ಘಾಟನೆ ಜೊತೆಗೆ ಪತ್ರಿಕಾ ದಿನಾಚರಣೆಯ ಸಂದರ್ಭದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಪತ್ರಕರ್ತರ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

 

ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಿ.ಎಂ.ರಾಜಶೇಖರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟನೆ ಮಾಡಲಿದ್ದಾರೆ.

ಕಾಡುಸಿದ್ದೇಶ್ವರ ಸಂಸ್ಥಾನ ಮಠದ ಕರಿವೃಷಭ ದೇಶಿ ಕೇಂದ್ರ ಶಿವಯೋಗೀಶ್ವರರು, ಅವಧೂತ ವಿನಯ್ ಗುರೂಜಿ, ಹೊರನಾಡು ಕ್ಷೇತ್ರದ ಡಾ. ಭೀಮೇಶ್ವರ ಜೋಷಿ ಸಾನಿಧ್ಯ ವಹಿಸುವರು. ರಾಜ್ಯದ ಮಂತ್ರಿಗಳು ಸೇರಿದಂತೆ ನಾಡಿನ ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ವರದಿ:
ಹೆಚ್.ಮಲ್ಲಿಕಾರ್ಜುನ
ರಾಜ್ಯ ಸಮಿತಿ ಸದಸ್ಯರು
ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ (ರಿ)ಬೆಂಗಳೂರು
ಮೊ: ೯೮೮೦೬೯೩೭೨೩

ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ 33ನೇ ವರ್ಧಂತೀ ಉತ್ಸವ

ಗಂಗಾವತಿ: ನಗರದ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಜುಲೈ-29 ಮಂಗಳವಾರ, ಶ್ರೀ ವಿಶ್ವಾವಸು ನಾಮ ಸಂವತ್ಸರದ ಶ್ರಾವಣ ಶುದ್ಧ ಪಂಚಮಿಯಂದು ಉತ್ಸವ ನಡೆಯಲಿದೆ.

ಬೆಳಗ್ಗೆ 9 ಘಂಟೆಗೆ ಗುರುಗಳ ಪಾದುಕೆಗಳಿಗೆ ಅಭೀಷೇಕ, ಶಂಕರ ಅಷ್ಟೋತ್ತರ ಪಾರಾಯಣ ಸೇರಿದಂತೆ ಧಾರ್ಮಿಕ ಪೂಜೆ ಕಾರ್ಯಕ್ರಮಗಳು ಆಯೋಜಿಸಲಾಗಿದೆ.

ಸಂಜೆ: 5.30ರಿಂದ ಭಜನೆ, ಆರತಿ ಹಾಗೂ ಮಹಾಮಂಗಳಾರತಿ ಜರುಗಲಿವೆ

ಪತ್ರಿಕಾ ದಿನಾಚರಣೆ ಪೂರ್ವಭಾವಿ ಸಭೆ ಗಂಗಾವತಿಯಲ್ಲಿ ಜರುಗಿತು.

ಗಂಗಾವತಿ: ಜುಲೈ 31 ರಂದು ಬೆಂಗಳೂರಿನ ಕೊಂಡಜ್ಜ ಬಸಪ್ಪ ಸಭಾಂಗಣದಲ್ಲಿ ಕರ್ನಾಟಕದ ಮಾಧ್ಯಮ ಪತ್ರಕರ್ತರ (ರಿ) ಸಂಘವನ್ನು ಅಧಿಕೃತವಾಗಿ ಸ್ಥಾಪಿಸಲಾಗುವುದು.

ಈ ಸಂಘವನ್ನು ಉಪಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಅದೇ ವೇದಿಕೆಯಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮವೂ ಜರುಗಲಿದೆ.

ಅದೇ ದಿನ ಸಂಘದ ವೆಬ್‌ಸೈಟ್ ಉದ್ಘಾಟನೆ ಮತ್ತು ಸದಸ್ಯರ ಗುರುತಿನ ಕಾರ್ಡ್ ವಿತರಣೆ ಕಾರ್ಯಕ್ರಮಗಳು ಕೂಡ ನಡೆಯಲಿವೆ.

ಈ ಕಾರ್ಯಕ್ರಮಕ್ಕೆ ಗಂಗಾವತಿಯ ಹೆಚ್ಚಿನ ಪತ್ರಕರ್ತರು ಭಾಗವಹಿಸಬೇಕೆಂಬ ಉದ್ದೇಶದಿಂದ ಪೂರ್ವಭಾವಿ ಸಭೆ ಗಂಗಾವತಿಯಲ್ಲಿ ಜುಲೈ 17ರಂದು ನಡೆಯಿತು.

ನಗರದ ಕೊಟ್ಟೂರು ಬಸವೇಶ್ವರ ದೇವಸ್ಥಾನದ ಸಭಾಭವನದಲ್ಲಿ ಈ ಸಭೆ ನಡೆದಿದ್ದು, ರಾಜ್ಯ ಸಮಿತಿ ಸದಸ್ಯ ಎಚ್. ಮಲ್ಲಿಕಾರ್ಜುನ ಹೊಸಕೇರಿ ನೇತೃತ್ವ ವಹಿಸಿದ್ದರು.

ಜಿಲ್ಲಾಧ್ಯಕ್ಷ ರಮೇಶ್ ಕೋಟಿಯವರೂ ಸಭೆಯಲ್ಲಿ ಭಾಗವಹಿಸಿದ್ದು, ಕಾರ್ಯಕ್ರಮದ ಯಶಸ್ಸಿಗಾಗಿ ವಿವಿಧ ವಿಚಾರಗಳ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ, ಪತ್ರಕರ್ತರು ಸಂಘದ ಮಾನಸಮರ್ಥತೆ ಕಾಪಾಡಿ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ನಿರ್ಣಯ ತೆಗೆದುಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಡಿ.ಎಂ. ಸುರೇಶ್, ಎಸ್. ಮಾರ್ಕಂಡೇಯ, ರಾಮಕೃಷ್ಣ ಸಿ.ಡಿ, ರಮೇಶ್ ಕಾಳಿ, ಮಲ್ಲೇಶ ನಾಯ್ಕ್ ಮತ್ತು ಹಲವರು ಭಾಗವಹಿಸಿದರು.

ಸಭೆಯಲ್ಲಿ ನಾಗರಾಜ ಕೊಟ್ನೆಕಲ್, ಸೋಮಪ್ಪ, ನಾಗರಾಜ ಅಂಗಡಿ, ಶರಣಯ್ಯ ಹೆಚ್.ಎಂ, ಡಿ.ರವಿಕುಮಾರ್, ಗಾಯಕವಾಡ, ಯಮನೂರಪ್ಪ, ಹೆಚ್.ಭೋಗೇಶ್ ಮತ್ತು ಇತರರು ಉಪಸ್ಥಿತರಿದ್ದರು.

ಆಷಾಢ ಮಾಸದ ಭೀಮನ ಅಮಾವಾಸ್ಯೆ: ಕಿಷ್ಕಿಂದ ಅಂಜನಾದ್ರಿಯಲ್ಲಿ ವಿಶೇಷ ಕಾರ್ಯಕ್ರಮಗಳು

ಗಂಗಾವತಿ: ಇತಿಹಾಸ ಪ್ರಸಿದ್ಧ ಹನುಮ ಹುಟ್ಟಿದ ನಾಡೆಂದು ಪ್ರಸಿದ್ಧವಾದ ವಿಜಯನಗರ ಸಾಮ್ರಾಜ್ಯದ ಆನೆಗುಂದಿ ಪ್ರದೇಶದ ಕಿಷ್ಕಿಂದ ಅಂಜನಾದ್ರಿಯಲ್ಲಿ ಭೀಮನ ಅಮಾವಾಸ್ಯೆ ಅಂಗವಾಗಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಈ ಪೂಜಾ ಕಾರ್ಯಕ್ರಮಗಳು ಚಿಕ್ಕ ರಾಮಪುರದ ಆಂಜನೇಯ ದೇವಾಲಯದಲ್ಲಿ, ಪ್ರಧಾನ ಅರ್ಚಕ ಶ್ರೀ ವಿದ್ಯಾದಾಸ ಬಾಬಾಜಿ ಅವರ ನೇತೃತ್ವದಲ್ಲಿ ಉತ್ಸವಪೂರ್ವಕವಾಗಿ ನೆರವೇರಿಸಲ್ಪಟ್ಟವು.

ಬೆಳಿಗ್ಗೆ ಮೂಲ ಆಂಜನೇಯನಿಗೆ ಜಲಾಭಿಷೇಕ, ಪಂಚಾಮೃತಾಭಿಷೇಕ, ಅಷ್ಟೋತ್ತರ ಪಾರಾಯಣ, ವಾಯುಸ್ತುತಿ ಪಠಣ, ಹನುಮಾನ್ ಚಾಲೀಸಾ ಪಾರಾಯಣ ಹಾಗೂ ಭಜನೆಗಳನ್ನು ಮಾಡಲಾಯಿತು.

ಪೂಜೆಯ ಬಳಿಕ ಮಹಾಮಂಗಳಾರತಿ ಹಾಗೂ ಅನ್ನಸಂತರ್ಪಣೆ ನಡೆಯಿತು. ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಇಷ್ಟಾರ್ಥಗಳಿಗಾಗಿ ಪ್ರಾರ್ಥನೆ ಸಲ್ಲಿಸಿದರು.

 

ಕೊಪ್ಪಳ, ಬಳ್ಳಾರಿ, ವಿಜಯನಗರ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಅಪಾರ ಭಕ್ತರು ಈ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಅರ್ಚಕ ವಿದ್ಯಾದಾಸ ಬಾಬಾಜಿ ಮಾತನಾಡುತ್ತಾ, “ಆಂಜನೇಯನ ಅವತಾರವಾದ ಭೀಮಸೇನ ಧರ್ಮಮಾರ್ಗದಲ್ಲಿ ನಡೆದದ್ದು, ಕೌರವರು ಸೋಲಲು ಇದು ಕಾರಣವಾಯಿತು,” ಎಂದು ಹೇಳಿದರು.

ಪತಿಗೆ ಪಾದಪೂಜೆ ಮಾಡುವುದರ ಮೂಲಕ ಪತ್ನಿಯು ಗಂಡನ ಆಯುಷ್ಯ ವೃದ್ಧಿಗೆ ಪ್ರಾರ್ಥಿಸುವ ಪವಿತ್ರ ದಿನವಾಗಿದೆ ಎಂಬುದನ್ನೂ ಅವರು ತಿಳಿಸಿದರು.

ಕರ್ನಾಟಕ ಧ್ವನಿ ಗಾಯನ ಕಾರ್ಯಕ್ರಮ

ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ ಹಾಗೂ ಚಿಕ್ಕಮಗಳೂರು ಜಿಲ್ಲಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ರಾಜ್ಯಮಟ್ಟದ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ.

ಚಿಕ್ಕಮಗಳೂರಿನ ಕನ್ನಡ ಭವನದಲ್ಲಿ ದಿನಾಂಕ 27-07-2025 ಭಾನುವಾರ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಮಧುನಾಯ್ಕ್ ಲಂಬಾಣಿ ತಿಳಿಸಿದ್ದಾರೆ.

ಈ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧೆಡೆಗಳಿಂದ 34 ಮಂದಿ ಗಾಯಕ-ಗಾಯಕಿಯರು ಆಯ್ಕೆಯಾಗಿದ್ದು, ತಮ್ಮ ಕಲೆ ಪ್ರದರ್ಶನ ಮಾಡಲು ಅವಕಾಶ ಪಡೆಯಿದ್ದಾರೆ.

ಆಯ್ಕೆಯಾದ ಕಲಾವಿದರು ಇಂತಿವೆ:

  1. ಶ್ರೀಮತಿ ಸುಮಂಗಲಾ ದೇಸಾಯಿ (ಜೋಯಿಡಾ)

  2. ವಿಜಯಕುಮಾರ್ (ಹೊಸಪೇಟೆ)

  3. ಶ್ರೀಮತಿ ಜಿ.ನೀಲಗಂಗಮ್ಮ (ಹೊಸಪೇಟೆ)

  4. ಶ್ರೀಮತಿ ವಾಸವಿ ಸತೀಶ್ (ತುರುವೇಕೆರೆ)

  5. ವಾಲ್ಯಾನಾಯ್ಕ್ ಎಲ್ (ವಿಜಯನಗರ)

  6. ರಾಕೇಶ್ ಸಿಂಗ್ (ಚಿಕ್ಕಮಗಳೂರು)

  7. ಪಿ.ಮಲ್ಲಿಕಾರ್ಜುನ (ದಾವಣಗೆರೆ)

  8. ರಾಮನಾಥ ಜೆ. ನಾಯ್ಕ (ಅಂಕೋಲಾ)

  9. ಶ್ರೀಮತಿ ರೀನಾ ನಂದನ್ (ಹೊಸಪೇಟೆ)

  10. ಹನುಮಂತ ನಾಯ್ಕ್ ಸಿ (ನಾಗರಕಟ್ಟೆ ತಾಂಡ)

  11. ಬಿ.ಎನ್. ನಾಗೇಶ್ (ದಾವಣಗೆರೆ)

  12. ಗೌರಿ ಅರಸು (ಮಂಡ್ಯ)

  13. ವೀಣಾ ನಟರಾಜ್ (ಅಜ್ಜಂಪುರ)

  14. ಸ್ನೇಹ (ತೀರ್ಥಹಳ್ಳಿ)

  15. ಎಲ್. ಗಣೇಶ್ (ತುಂಬಿನಕೇರಿ ದೊಡ್ಡತಾಂಡ)

  16. ಆರ್. ಪ್ರಿಯಾಂಕ (ಹೊಸಪೇಟೆ)

  17. ಟಿ. ದೀಪಾ (ವಿಜಯನಗರ)

  18. ವಿದ್ಯಾ ಕೆ (ಚಿಕ್ಕಮಗಳೂರು)

  19. ಪ್ರಶಾಂತ್ ಕುಲಕರ್ಣಿ (ದಾಂಡೇಲಿ)

  20. ಶಶಿಧರ್ ಹಿರೇಮಠ (ಸೊಂಡೂರು)

  21. ಲಕ್ಷ್ಮೀ ಎಚ್ (ಹೊಸಪೇಟೆ)

  22. ಜೂಟೂರು ರಾಘವೇಂದ್ರ (ಹೊಸಪೇಟೆ)

  23. ಶ್ರೀದೇವಿ ತೇರದಾಳ (ಮಹಾಲಿಂಗಪುರ)

  24. ಉಮೇಶ್ ಕುಮಾರ್ ಎಚ್.ಎನ್ (ದಾವಣಗೆರೆ)

  25. ವಿಜಯಶಾಂತಿ ಕೆ (ಕಮಲಾಪುರ)

  26. ಡಾ. ಅಶೋಕ್ ಬಾಬು ಎ.ಆರ್ (ಚಿಕ್ಕಬಳ್ಳಾಪುರ)

  27. ಎಚ್. ಶ್ರೀನಿವಾಸ್

  28. ತಿಮ್ಮನಾಯ್ಕ್ ಸಿ (ಮುದ್ಲಾಪುರ)

  29. ರಮೇಶ್ ಎಸ್. ಲಮಾಣಿ (ಚಿತ್ರದುರ್ಗ)

  30. ಭಾಗ್ಯ ಎಸ್ (ಶಿವಮೊಗ್ಗ)

  31. ಕವಿತಾಬಾಯಿ ವೈ (ಭದ್ರಾವತಿ)

  32. ವಿಜಯ್ ಕುಮಾರ್ ಸಿ.ಆರ್ (ಚಿಕ್ಕಮಗಳೂರು)

  33. ಸುರೇಶ್ ರಾವ್ (ತುಮಕೂರು)

  34. ಮಹಾನಂದ ಮಠಪತಿ (ಕಲ್ಲೂರ್ ರೋಡ್)

ಈ ಗಾಯನ ಕಾರ್ಯಕ್ರಮದ ವೇಳೆ “ಕನ್ನಡ ಕೋಗಿಲೆ” ಎಂಬ ರಾಜ್ಯಮಟ್ಟದ ಪ್ರಶಸ್ತಿ ಸಮಾರಂಭ ಕೂಡ ನಡೆಯಲಿದೆ ಎಂದು ತಿಳಿಸಲಾಗಿದೆ.

ಈ ಎಲ್ಲ ಗಾಯಕ ಗಾಯಕಿಯರಿಗೆ ಕರ್ನಾಟಕ ರಾಜ್ಯ ಬರಹಗಾರರ ಸಂಘದ ಅಧ್ಯಕ್ಷರು, ಗೌರವಾಧ್ಯಕ್ಷರು ಮತ್ತು ಜಿಲ್ಲಾಧ್ಯಕ್ಷರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಅಂತೆಯೇ, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕೆಂದು ಸಂಘದ ಪದಾಧಿಕಾರಿಗಳು ಕೋರಿದ್ದಾರೆ.

ಲಯನ್ಸ್ ಕ್ಲಬ್ ನ ವತಿಯಿಂದ ಉಚಿತ ಕನ್ನಡಕ ವಿತರಣೆ

ಗಂಗಾವತಿ: ಲಯನ್ಸ್ ಕ್ಲಬ್ ಗಂಗಾವತಿ ಮತ್ತು ಲಯನ್ಸ್ ಕ್ಲಬ್ ಬೆಂಗಳೂರು ವಿಜಯನಗರ ಸಂಸ್ಥೆಗಳ ಸಹಯೋಗದಲ್ಲಿ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ಜುಲೈ 24ರಂದು ಜರುಗಿತು.

ಈ ಕಾರ್ಯಕ್ರಮದಲ್ಲಿ, ಜುಲೈ 16ರಂದು ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಕಣ್ಣಿನ ತಪಾಸಣೆ ಮಾಡಿಸಿಕೊಂಡಿದ್ದ ನೇತ್ರ ರೋಗಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ 360 ಕನ್ನಡಕಗಳನ್ನು ವಿತರಿಸಲಾಯಿತು.

ವಿತರಣಾ ಕಾರ್ಯಕ್ರಮ ಶ್ರೀರಾಮನಗರದ ಎ.ಕೆ.ಆರ್.ಡಿ ಪಿಯು ಕಾಲೇಜಿನ ಆವರಣದಲ್ಲಿ ನಡೆದಿದ್ದು, ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರು ಇದರ ಪ್ರಯೋಜನ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ|| ಶಿವಕುಮಾರ ಮಾಲಿಪಾಟೀಲ್ ಹಾಗೂ ವಿಜಯನಗರ ಲಯನ್ಸ್ ಕ್ಲಬ್‌ನ ಲ.ಗಂಗಾಧರ ಮತ್ತು ಲ.ಎನ್. ಭೈರೇಗೌಡ ಭಾಗವಹಿಸಿದರು.

ಗಂಗಾವತಿ ಲಯನ್ಸ್‌ ಕ್ಲಬ್‌ ನ ಹಿರಿಯ ಸದಸ್ಯರಾದ ಲ.ಹರಿಬಾಬು, ಆರೋಗ್ಯ ಶಿಬಿರದ ಸಂಯೋಜಕರಾದ ಲ.ಸುಬ್ರಮಣ್ಯೇಶ್ವರರಾವ್‌ ಭಾಗವಹಿಸಿದರು.

ಲಯನ್ಸ್‌ ಕ್ಲಬ್‌ ಗಂಗಾವತಿ ಖಜಾಂಚಿಯಾದ ಲ.ಶಿವಪ್ಪ ಗಾಳಿ, ಲ.ಅಜಾದ್ ಗನ್ನಮನಿ, ಲ.ಶಿವಕುಮಾರ ಅಂಗಡಿ, ಲ.ಗುರುಪ್ರಸಾದ, ಪಿ.ಸತ್ಯನಾರಾಯಣ, ಎ.ಕೆ.ಆರ್.ಡಿ ಪಿ.ಯು ಕಾಲೇಜಿನ ಪ್ರಾಂಶುಪಾಲರಾದ ಅಮರೇಶ ಪಾಟೀಲ್‌ ಸೇರಿದಂತೆ ಇತರರು, ಫಲಾನುಭವಿಗಳಿಗೆ ಕನ್ನಡಕಗಳನ್ನು ವಿತರಿಸಿದರು.

ಮಾಹಿತಿಗಾಗಿ
ಡಾ|| ಶಿವಕುಮಾರ ಮಾಲಿಪಾಟೀಲ್
ಅಧ್ಯಕ್ಷರು, ಲಯನ್ಸ್ ಕ್ಲಬ್, ಗಂಗಾವತಿ
ಮೋ:ನಂ: ೯೪೪೮೩೦೨೭೭೫

ಚಿಕ್ಕಮಗಳೂರು ಕನ್ನಡ ಭವನದಲ್ಲಿ ರಾಜ್ಯ ಮಟ್ಟದ ಗಾಯನ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ

ಚಿಕ್ಕಮಗಳೂರಿನ ಕನ್ನಡ ಭವನದಲ್ಲಿ ಜುಲೈ 27, 2025ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ರಾಜ್ಯಮಟ್ಟದ ಗಾಯನ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ ಹಾಗೂ ಚಿಕ್ಕಮಗಳೂರು ಜಿಲ್ಲಾ ಘಟಕವು ಸಂಯುಕ್ತವಾಗಿ ಆಯೋಜಿಸಿವೆ.

ರಾಜ್ಯ ಸಂಘವು ಪ್ರತಿ ಭಾನುವಾರ ಆನ್‌ಲೈನ್‌ನಲ್ಲಿ ಜಾನಪದ, ಭಾವಗೀತೆ, ಚಿತ್ರಗೀತೆಗಳನ್ನು ಒಳಗೊಂಡ ಗಾಯನ ಸ್ಪರ್ಧೆಗಳನ್ನು ಹಮ್ಮಿಕೊಂಡಿತ್ತು.

ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಗಾಯಕ-ಗಾಯಕಿಯರಿಗೆ ಪ್ರಶಸ್ತಿ ಪತ್ರ ನೀಡಿ ಪ್ರೋತ್ಸಾಹ ನೀಡಲಾಗಿದೆ.

ಅವರಲ್ಲಿ ಆಯ್ಕೆಯಾದ 34 ಮಂದಿ ಪ್ರತಿಭಾನ್ವಿತ ಗಾಯಕರಿಗೆ ಈ ಸಮಾರಂಭದಲ್ಲಿ ಕನ್ನಡ ಕೋಗಿಲೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿಕ್ಕಮಗಳೂರು ಜಿಲ್ಲಾ ಬರಹಗಾರರ ಸಂಘದ ಅಧ್ಯಕ್ಷರಾದ ಡಾ. ವಿದ್ಯಾ ಕೆ. ಅವರು ವಹಿಸಲಿದ್ದಾರೆ.

ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಜ್ಯ ಅಧ್ಯಕ್ಷರಾದ ಮಧುನಾಯಕ್ ಲಂಬಾಣಿ ಉದ್ಘಾಟಿಸಲಿದ್ದಾರೆ.

ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸೂರಿ ಶ್ರೀನಿವಾಸ್ ಆಶಯ ಭಾಷಣ ನೀಡಲಿದ್ದಾರೆ.

ಹಾಸನದ ಸಾಹಿತಿ ಗೊರೂರು ಅನಂತರಾಜು ಮತ್ತು ಕುರುವಂಜಿ ಕೆ.ಪಿ. ವೆಂಕಟೇಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಇದಲ್ಲದೆ, ಚಿಕ್ಕಮಗಳೂರಿನ ಬಿ.ಎಲ್. ಪ್ರವೀಣ್, ಜಯಣ್ಣ, ಎಂ.ಎಸ್. ನಾಗರಾಜ್, ಎಚ್.ಎಂ. ಜಗದೀಶ್, ಹಸೈನಾರ್ ಬಿಳಿಗುಳ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ರಾಕೇಶ್ ಸಿಂಗ್, ಡಾ. ಶೈಲಜಾ ಕುಮಾರ್, ವಿನೋದ್, ಇಂಪಾ ನಾಗರಾಜ್, ನವೀನ್ ಬಿ.ಆರ್., ವಿಜಯ್ ಕುಮಾರ್, ಸಿ.ಆರ್.ಗೌರವ ಕಾರ್ಯದರ್ಶಿ, ರವಿ ಕುನ್ನಳ್ಳಿ ಗೌರವ ಸಹ ಉಪಸ್ಥಿತರಿರಲಿದ್ದಾರೆ.

ಪ್ರಶಸ್ತಿ ಪ್ರದಾನವನ್ನು ಮಹಾಭಾರತ ಕಲಾವಿದರಾದ ಮಧುಚಂದ್ರ, ರಮೇಶ್ ಯಾದವ್ ಮತ್ತು ಕಾಮಿಡಿ ಕಿಲಾಡಿ ಕಲಾವಿದರು ನೆರವೇರಿಸಲಿದ್ದಾರೆ.