ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷರ ಹಾಗೂ ಜಿಲ್ಲಾ ಪ್ರತಿನಿಧಿಗಳ ಚುನಾವಣೆ.
ಕೊಪ್ಪಳ: ನಗರದ ಕಿನ್ನಾಳ ರಸ್ತೆಯಲ್ಲಿರುವ ನಮ್ಮ ಸದಾಚಾರ ಸದನ ಭವನದಲ್ಲಿ ಏಪ್ರಿಲ್-13 ರವಿವಾರದಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷರ ಹಾಗೂ ಜಿಲ್ಲಾ ಪ್ರತಿನಿಧಿಗಳ ಆಯ್ಕೆಗಾಗಿ ಚುನಾವಣೆ ಜರುಗಿತು. ಕರ್ನಾಟಕ ರಾಜ್ಯದ್ಯಂತ ಏಕಕಾಲಕ್ಕೆ ಜಿಲ್ಲಾ ಕೇಂದ್ರಗಳಲ್ಲಿ ನಡೆದ ಚುನಾವಣೆಗೆ ಮಹಾಸಭಾ ಸದಸ್ಯತ್ವ ಪಡೆದ ಜಿಲ್ಲೆಯ 1,600 ಮತದಾರರು ತಮ್ಮ ಮತದಾರರ ಹಕ್ಕನ್ನು ಚಲಾಯಿಸಿದರು. ಈ ಸಂದರ್ಭದಲ್ಲಿ ವಿಪ್ರ ಸಮಾಜದ ಮುಖಂಡರಾದ ಪ್ರಶಾಂತ್ ಕಿನ್ನಾಳ ಮಾತನಾಡಿ, ಸಮಾಜದ ಸಂಘಟನೆಗಾಗಿ ಮತದಾರರು ತಮ್ಮ ಮತವನ್ನು ಅತ್ಯಂತ ಉತ್ಸಾಹದಿಂದ ಚಲಾಯಿಸಲು ಕೊಪ್ಪಳ…
