ಕರ್ನಾಟಕ ಪ್ರಗತಿಪರ ಪೌರಕಾರ್ಮಿಕರ ಸಂಘದ ನೂತನ ಗಂಗಾವತಿ ತಾಲೂಕು ಸಮಿತಿ ರಚನೆ

ಗಂಗಾವತಿ: ಏಪ್ರಿಲ್-೧೭ ಗುರುವಾರ ಗಂಗಾವತಿ ನಗರದ ಬಸ್‌ ಸ್ಟ್ಯಾಂಡ್‌ ಹತ್ತಿರ ಇರುವ ತುಳಸಪ್ಪ ಛತ್ರದ ಬಯಲಲ್ಲಿ ಕರ್ನಾಟಕ ಪ್ರಗತಿಪರ ಪೌರಕಾರ್ಮಿಕರ ಸಂಘಟನೆಯ ಸಭೆ ಸೇರಿ ನೂತನ ಗಂಗಾವತಿ ತಾಲೂಕು ಸಮಿತಿಯನ್ನು ರಚಿಸಲಾಯಿತು ಎಂದು ಎಐಸಿಸಿಟಿಯು ಜಿಲ್ಲಾ ಅಧ್ಯಕ್ಷರಾದ ವಿಜಯ ದೊರೆರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಘದ ನೂತನ ತಾಲೂಕ ಗೌರವ ಅಧ್ಯಕ್ಷರಾಗಿ ಡಬ್‌ಡಬ್ ಹನುಮಂತಪ್ಪ, ಅಧ್ಯಕ್ಷರಾಗಿ ಮಾಯಮ್ಮ, ಉಪಾಧ್ಯಕ್ಷರಾಗಿ ಪಾರ್ವತಮ್ಮ, ಕಾರ್ಯದರ್ಶಿಯಾಗಿ ರಮೇಶ ಕೆ., ಖಜಾಂಚಿಯಾಗಿ ಗಾಲಿ ಹುಲಿಗೆಮ್ಮ, ಸಹ ಖಜಾಂಚಿಯಾಗಿ ಬಂಕದ ಹುಲಿಗೆಮ್ಮ, ಅದೇರೀತಿ ತಾಲ್ಲೂಕು ಸಮಿತಿ ಸದಸ್ಯರಾಗಿ ಹೇಮಣ್ಣ, ಕೊಟ್ರಪ್ಪ, ಇಂದ್ರಮ್ಮ, ಕರಿಮೂತಿ ಹನುಮಂತಪ್ಪ, ದುರುಗಪ್ಪ ಕಲ್ಗುಡಿ, ಗಂಗಮ್ಮ ಸ್ವಾಮಿ, ನಾಗಮ್ಮ ಮಲ್ಲಿಕಪ್ಪ, ಬಾಬರ್, ಮೌಲಪ್ಪ, ಸಣ್ಣ ಹುಲಗಪ್ಪ ಆಯ್ಕೆಯಾದರು.

ಈ ಸಂದರ್ಭದಲ್ಲಿ ಕಾ|| ಸಣ್ಣ ಹನುಮಂತಪ್ಪ ಹುಲಿಹೈದರ, ಕಾ|| ಪರಶುರಾಮ್, ಕಾ|| ಕೇಶವನಾಯಕ, ಕಾ|| ನಸ್ಪುಡಿ ಗಿಡ್ಡಪ್ಪ, ಕಾ|| ಉಮೇಶ, ಕಾ|| ರೇಣುಕಮ್ಮ ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿಯವರಿಗೆ ಕನ್ನಡಪ್ರೇಮಿ ಜಿ.ರಾಮಕೃಷ್ಣ ಅವರಿಂದ ಆತ್ಮೀಯ ಸನ್ಮಾನ.

ಗಂಗಾವತಿ: ಕಳೆದ ೨೦೨೩ ರಲ್ಲಿ ಕನಕಗಿರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿ ಶ್ರೀ ಶಿವರಾಜ ತಂಗಡಗಿಯವರು ಕೊಪ್ಪಳ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ನಿರಂತರ ಶ್ರಮವಹಿಸುತ್ತಿದ್ದಾರೆ.

ಇವರಿಗೆ ಶ್ರೀರಾಮನಗರದಲ್ಲಿ ಏಪ್ರಿಲ್-೧೫ ಮಂಗಳವಾರ ಶೀರಾಮನಗರದ ಸ್ವಾಮಿ ವಿವೇಕಾನಂದ ಸೇವಾ ಸಂಘದ ಅಧ್ಯಕ್ಷರಾದ ಕನ್ನಡಪ್ರೇಮಿ ಜಿ. ರಾಮಕೃಷ್ಣ ಅವರು ಆತ್ಮೀಯವಾಗಿ ಸನ್ಮಾನಿಸಿದರು.

ರಾಂಪುರ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್‌ರವರ ೧೩೪ನೇ ಹಾಗೂ ಡಾ. ಬಾಬು ಜಗಜೀವನರಾಮ್‌ರವರ ೧೧೮ನೇ ಜನ್ಮದಿನಾಚರಣೆ ಸಮಾರಂಭ ಅದ್ಧೂರಿ ಆಚರಣೆ.

ಗಂಗಾವತಿ: ತಾಲೂಕಿನ ರಾಂಪುರ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್‌ರವರ ೧೩೪ನೇ ಜಯಂತಿ ಹಾಗೂ ಡಾ. ಬಾಬು ಜಗಜೀವನರಾಮ್ ರವರ ೧೧೮ನೇ ಜನ್ಮ ದಿನಾಚರಣೆ ಸಮಾರಂಭವನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಗ್ರಾ.ಪಂ ಸದಸ್ಯರಾದ ಗೋವಿಂದಪ್ಪ ವಹಿಸಿದ್ದರು. ಗೌರವಾಧ್ಯಕ್ಷರಾಗಿ ರಾಂಪುರ ಗ್ರಾಮದ ಹನುಮಂತಪ್ಪ ಪಂಚಾಯಿತಿ ಆಗಮಿಸಿದ್ದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಇರಕಲ್‌ಗಡಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರಾದ ಡಾ. ಶಿವರಾಜ್ ನೆರವೇರಿಸಿ ಮುಖ್ಯ ಭಾಷಣಕಾರರಾಗಿ ಭಾಷಣ ಮಾಡಿದರು.

ಮುಖ್ಯ ಅತಿಥಿಗಳಾಗಿ ಗ್ರಾಮೀಣ ಪೊಲೀಸ್ ಠಾಣೆಯ ಎ.ಎಸ್.ಐ ಚೌಹಾನ್, ಮಾದಿಗ ದಂಡೋರ ರಾಜ್ಯಾಧ್ಯಕ್ಷರಾದ ಹುಸೇನಪ್ಪ, ಮಲ್ಲಾಪುರ ಗ್ರಾ.ಪಂ ಅಧ್ಯಕ್ಷರಾದ ಛತ್ರಪ್ಪ ಭಾಗವಹಿಸಿದ್ದರು.

ಸಂಜೆ ೬ಕ್ಕೆ ಡಾ. ಬಿ.ಆರ್. ಅಂಬೇಡ್ಕರ್‌ರವರ ಜೀವನ ಚರಿತ್ರೆ “ಮಹಾನಾಯಕ” ಚಲನಚಿತ್ರ ಪ್ರದರ್ಶನ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿಯ ಕೊಪ್ಪಳ ಜಿಲ್ಲಾ ಸಂಚಾಲಕರಾದ ಮರಿಯಪ್ಪ ಕುಂಟೋಜಿ, ವಸಂತರಾವ್, ನಾಗರಾಜ, ಗಂಗಾವತಿ ತಾಲೂಕು ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ಪರಮಾನಂದ, ವೆಂಕಟೇಶ, ಭೀಮಣ್ಣ, ಕರಿಯಣ್ಣ, ಮಧು, ಭಾಗ್ಯವ್ವ, ಅಬ್ಬಾಸ್, ಪ್ರಸಾದ್, ಪಿ. ಶಾಂತ, ಅಗ್ರಿಪ್, ಎ. ರಾಜು, ಆಂಜನೇಯ, ದೇವರಾಜ, ರಾಜು, ಸಣ್ಣರಾಜ, ಯೇಶಿಫ್, ತಿಪ್ಪಣ್ಣ ಅರಗಿದ್ದ, ರವೀಂದ್ರ, ಅಭಿಷೇಕ, ಮಾಜಿ ಗ್ರಾ.ಪಂ ಅಧ್ಯಕ್ಷ ಕೃಷ್ಣ ಸೇರಿದಂತೆ ಊರಿನ ಗುರು ಹಿರಿಯರು ಮತ್ತು ಮಾದಿಗ ಸಮಾಜದ ಬಂಧುಗಳು, ಮಹಿಳೆಯರು, ಯುವಕರು ಪಾಲ್ಗೊಂಡಿದ್ದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷರ ಹಾಗೂ ಜಿಲ್ಲಾ ಪ್ರತಿನಿಧಿಗಳ ಚುನಾವಣೆ.

ಕೊಪ್ಪಳ: ನಗರದ ಕಿನ್ನಾಳ ರಸ್ತೆಯಲ್ಲಿರುವ ನಮ್ಮ ಸದಾಚಾರ ಸದನ ಭವನದಲ್ಲಿ ಏಪ್ರಿಲ್-13‌ ರವಿವಾರದಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷರ ಹಾಗೂ ಜಿಲ್ಲಾ ಪ್ರತಿನಿಧಿಗಳ ಆಯ್ಕೆಗಾಗಿ ಚುನಾವಣೆ ಜರುಗಿತು.

ಕರ್ನಾಟಕ ರಾಜ್ಯದ್ಯಂತ ಏಕಕಾಲಕ್ಕೆ ಜಿಲ್ಲಾ ಕೇಂದ್ರಗಳಲ್ಲಿ ನಡೆದ ಚುನಾವಣೆಗೆ ಮಹಾಸಭಾ ಸದಸ್ಯತ್ವ ಪಡೆದ ಜಿಲ್ಲೆಯ 1,600 ಮತದಾರರು ತಮ್ಮ ಮತದಾರರ ಹಕ್ಕನ್ನು ಚಲಾಯಿಸಿದರು.

ಈ ಸಂದರ್ಭದಲ್ಲಿ ವಿಪ್ರ ಸಮಾಜದ ಮುಖಂಡರಾದ ಪ್ರಶಾಂತ್ ಕಿನ್ನಾಳ ಮಾತನಾಡಿ, ಸಮಾಜದ ಸಂಘಟನೆಗಾಗಿ ಮತದಾರರು ತಮ್ಮ ಮತವನ್ನು ಅತ್ಯಂತ ಉತ್ಸಾಹದಿಂದ ಚಲಾಯಿಸಲು ಕೊಪ್ಪಳ ಜಿಲ್ಲೆಯ ನಾನಾ ಭಾಗದಿಂದ ಆಗಮಿಸುತ್ತಿರುವುದು ಸಂತಸದಾಯಕವಾಗಿದೆ. ಸಮಾಜದ ಕುಂದು ಕೊರತೆಗಳನ್ನು, ಸಂಕಷ್ಟಗಳನ್ನು ಹಾಗೂ ಬಡಮಕ್ಕಳಿಗೆ ಶಿಕ್ಷಣ, ಉದ್ಯೋಗ ಸೇರಿದಂತೆ ಸರ್ವತೋಮುಖ ಅಭಿವೃದ್ಧಿ ಮಹಾಸಭಾ ಯೋಜನೆಗಳನ್ನು ರೂಪಿಸಿಕೊಳ್ಳುವುದರ ಜೊತೆಗೆ ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳುವ ಉದ್ದೇಶವಾಗಿದೆ ಎಂದರು.

ಗಂಗಾವತಿ ಶಂಕರ ಮಠದ ಧರ್ಮದರ್ಶಿ ನಾರಾಯಣ ವೈದ್ಯ ಮಾತನಾಡಿ, ಚುನಾವಣೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ವಿಪ್ರ ಸಮಾಜದ ಬಗ್ಗೆ ಕಳಕಳಿ, ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸ್ಪಂದಿಸುವುದಕ್ಕೆ ಅರ್ಹತೆಯನ್ನು ಹೊಂದಿರುವ ರಾಜ್ಯಾಧ್ಯಕ್ಷ ಹಾಗೂ ಜಿಲ್ಲಾ ಪ್ರತಿನಿಧಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತದಾನ ಮಾಡುವುದು ಮುಖ್ಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನರಸಿಂಗರಾವ್ ಕುಲಕರ್ಣಿ, ಮುರಳಿದರ,  ಸತೀಶ್, ವಾಸುದೇವ ನವಲಿ, ನರಸಿಂಹ ಜೋಶಿ ಇತರರು ಉಪಸ್ಥಿತರಿದ್ದರು.

ಯಾಜ್ಞವಲ್ಕ ಮಂದಿರದಲ್ಲಿ ಸಂಭ್ರಮದ ಹನುಮ ಜಯಂತಿ ಸುಂದರಕಾಂಡ ಪ್ರವಚನ ಸಂಪನ್ನ.

ಗಂಗಾವತಿ: ಪ್ರತಿ ವರ್ಷದಂತೆ ಈ ವರ್ಷವೂ ಸಹ ನಗರದ ಶ್ರೀ ಯೋಗೀಶ್ವರ ಯಾಜ್ಞವಲ್ಕ ಮಂದಿರದಲ್ಲಿ ಹನುಮ ಜಯಂತಿ ಆಚರಣೆ ಶನಿವಾರದಂದು ಅಪಾರ ಭಕ್ತಾದಿಗಳ ಮಧ್ಯೆ ಶ್ರದ್ಧೆ ಭಕ್ತಿಯಿಂದ ಜರುಗಿತು. ಇದೇ ಸಂದರ್ಭದಲ್ಲಿ ಎರಡು ದಿನಗಳಿಂದ ವೇದಮೂರ್ತಿ ಕಾರ್ತಿಕ ಜೋಶಿ ಅವರಿಂದ ನಡೆಸಲಾದ ಸುಂದರಕಾಂಡ ಪ್ರವಚನ ಕಾರ್ಯಕ್ರಮ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಮುರಳಿದರ ಕುಲಕರ್ಣಿ ಮಾತನಾಡಿ ವಾಯುಪುತ್ರ ಹನುಮ ಹುಟ್ಟಿದ ಈ ಪುಣ್ಯ ಭೂಮಿಯಲ್ಲಿ ಜನಿಸಿದ ನಾವೇ ಪುಣ್ಯವಂತರು. ಸಮಾಜ ಬಾಂಧವರ ಸರ್ವರ ಸಹಕಾರದ ಮೇಲೆ ಮೇರೆಗೆ ಸದರಿ ದೇವಸ್ಥಾನದಲ್ಲಿ ವರ್ಷವಿಡಿ ವೈವಿಧ್ಯಮಯ ಕಾರ್ಯಕ್ರಮವನ್ನು ಆಯೋಜಿಸುವುದರ ಮೂಲಕ ಪಕ್ಕದಲ್ಲಿ ಧಾರ್ಮಿಕ ಮನೋಭಾವನೆ ಸಮಾಜವನ್ನು ಸಂಘಟಿಸಲಾಗುತ್ತದೆ ಎಂದು ಹೇಳಿದರು.

ಬೆಳಿಗ್ಗೆ ಆಂಜನೇಯ ಸ್ವಾಮಿಗೆ ಪಂಚಾಮೃತ ಅಭಿಷೇಕ ವಾಯುಸ್ತುತಿ ಪಾರಾಯಣ, ಆಂಜನೇಯದ ಉತ್ಸವ ಮೂರ್ತಿಯನ್ನು ತೊಟ್ಟಿಲು ಹಾಕುವಿಕೆ, ಸೇರಿದಂತೆ ಭಜನೆ, ಶ್ರೀ ಸತ್ಯನಾರಾಯಣ ಪೂಜೆ ವೈವಿಧ್ಯಮಯ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು.

ಸಮಾಜದ ಮುಖಂಡರಾದ ತಿರುಮಲರಾವ್ ಆಲಂಪಲ್ಲಿ, ಗೋಪಿ ದಿನ್ನಿ, ವೆಂಕಟೇಶ್ ಆನಂದ್, ಗುರುರಾಜ್ ಕುಲಕರ್ಣಿ ಪ್ರಕಾಶ್, ವಿಪ್ರ ಸಮಾಜದ ಅಧ್ಯಕ್ಷ ರಾಘವೇಂದ್ರ ಮೇಗೂರು, ರಾಘವೇಂದ್ರ ಲೆಕ್ಕಿಹಾಳ ಇತರರು ಉಪಸ್ಥಿತರಿದ್ದರು.

ನಂತರ ಮಹಾಮಂಗಳಾರತಿ ತೀರ್ಥ ಪ್ರಸಾದ ಜರುಗಿತು.

ಪಿಯು ಫಲಿತಾಂಶ: ಕಿಷ್ಕಿಂದ ಪಿಯು ಕಾಲೇಜಿನ ೭೬% ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣ
ಗಂಗಾವತಿ : ಕಿಷ್ಕಿಂದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ದ್ವಿತೀಯ ಪಿಯು ಫಲಿತಾಂಶದಲ್ಲಿ ಉತ್ತಮ ಸಾಧನೆಗೆದ್ದಿದ್ದಾರೆ. 2024 – 25 ದ್ವಿತೀಯ ಪಿಯು ಫಲಿತಾಂಶ ಪ್ರಕಟಗೊಂಡಿದ್ದು ವಿಜ್ಞಾನ ವಿಭಾಗ ಹಾಗೂ ಕಾಮರ್ಸ್ ವಿಭಾಗದಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸುವ ಮುಖಾಂತರ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.
ವಿಜ್ಞಾನ ವಿಭಾಗದಲ್ಲಿ ಶೇ 100% ಫಲಿತಾಂಶ ಬಂದಿದ್ದು, 198 ವಿದ್ಯಾರ್ಥಿ ಪರೀಕ್ಷೆ ಬರೆದಿದ್ದು  198 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಡಿಸ್ಟಿಂಕ್ಷನ್ 151 ವಿದ್ಯಾರ್ಥಿಗಳು, ಪ್ರಥಮ ಸ್ಥಾನ 01, ದ್ವಿತೀಯ ಸ್ಥಾನ 1 ಸ್ಥಾನಗಳನ್ನು ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ.
ಕಾಮರ್ಸ್ ವಿಭಾಗದಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಬಂದಿದೆ ಡಿಸ್ಟಿಂಕ್ಷನ್ 19 ವಿದ್ಯಾರ್ಥಿಗಳು ಪಡೆದಿದ್ದಾರೆ.  ಈ ವೇಳೆ ಸಂಸ್ಥೆಯ ಉಪಾಧ್ಯಕ್ಷರಾದ ಡಾ. ಮಲ್ಲನಗೌಡ ಮಾತನಾಡಿ ನಮ್ಮ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಶಕ್ತಿಮೀರಿ ಈ ಒಂದು ಉತ್ತಮ ಫಲಿತಾಂಶ ಪಡೆಯುವುದರಲ್ಲಿ ಯಶಸ್ವಿಯಾಗಿದ್ದಾರೆ, ಮುಂದಿನ ದಿನಮಾನದಲ್ಲಿ ಇದೇ ರೀತಿ ಉತ್ತಮ ಫಲಿತಾಂಶ ನೀಡುವುದೇ ನಮ್ಮ ಸಂಸ್ಥೆಯ ಮುಖ್ಯ ಗುರಿಯಾಗಿದೆ. ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಸಹಕರಿಸಿದ ಪಾಲಕರಿಗೆ ಬೋಧನೆ ಮಾಡಿದ ಉಪನ್ಯಾಸ ವೃಂದಕ್ಕೆ ಅಭಿನಂದನೆಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಪ್ಪ, ಆಡಳಿತ ಅಧಿಕಾರಿಯಾದ  ಎಲ್ ವೀರಭದ್ರರಾವ್, ಪ್ರಾಚಾರ್ಯರಾದ ಮುರಳಿಕೃಷ್ಣ ಹಾಗೂ ಉಪನ್ಯಾಸಕರು ಹರ್ಷ ವ್ಯಕ್ತಪಡಿಸಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಪಿಯು ಫಲಿತಾಂಶ ರೆಡ್ಡಿ ವೀರಣ್ಣ ಸಂಜೀವಪ್ಪ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ

ಕಾರಟಿಗಿ ರವಿನಗರ್ :  ಕಮ್ಮವಾರಿ  ಶಿಕ್ಷಣ ಸಂಸ್ಥೆ ( ರಿ ) ರೆಡ್ಡಿ ವೀರಣ್ಣ ಸಂಜೀವಪ್ಪ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ದ್ವಿತೀಯ ಪಿಯು ಫಲಿತಾಂಶದಲ್ಲಿ ಉತ್ತಮ ಸಾಧನೆಗೆದ್ದಿದ್ದಾರೆ.

2024 – 25 ದ್ವಿತೀಯ ಪಿಯು ಫಲಿತಾಂಶ ಪ್ರಕಟಗೊಂಡಿದ್ದು ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಅತ್ಯುತ್ತಮ ಹೆಚ್ಚಿನ ಅಂಕಗಳನ್ನು ಗಳಿಸುವ ಮುಖಾಂತರ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ ಶೇಕಡ 100% ಫಲಿತಾಂಶ ಬಂದಿದ್ದು, ವೈಷ್ಣವಿ 95% ಪ್ರಥಮ ಸ್ಥಾನ, ಗಂಗಮ್ಮ 94% ದ್ವಿತೀಯ ಸ್ಥಾನ, ಹಾಗೂ ಭರತ್ ಚೌದರಿ 93.83% ತೃತೀಯ ಸ್ಥಾನ  ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಶ್ರೇಯಾ 98.5% ಪಡೆದು ಜಿಲ್ಲೆಗೆ ಮೂರನೇ ಸ್ಥಾನ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ, ರುಚಿರಾ 97.17%, ದ್ವಿತೀಯ ಸ್ಥಾನ, ಅನಿಲಾ ಎ 96.2% ತೃತೀಯ ಸ್ಥಾನ  ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರು ಕೊಲ್ಲಾ ಶೇಷಗಿರಿರಾವ್, ಆಡಳಿತ ಅಧಿಕಾರಿ ಶ್ರೀಮನ್ ನಾರಾಯಣ, ಪ್ರಾಚಾರ್ಯರು ಕೆಎಸ್ ಗುರುಮಠ, ಉಪ ಪ್ರಾಚಾರ್ಯರು ವಸಂತ ದೇಸಾಯಿ, ಸಂಸ್ಥೆಯ ಸಂಯೋಜಕರು ಹಾಗೂ ಬಾಲ ಗುರುಕುಲ ಮುಖ್ಯಸ್ಥರು ಶ್ರೀದೇವಿ ಕೊಲ್ಲಾ ಉಪನ್ಯಾಸಕರು ಹರ್ಷ ವ್ಯಕ್ತಪಡಿಸಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ದ್ವಿತೀಯ ಪಿ.ಯು.ಸಿ ಫಲಿತಾಂಶದಲ್ಲಿ ಎಂ.ಎಸ್.ಎಂ.ಎಸ್. ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

ಗಂಗಾವತಿ: ತಾಲೂಕಿನ ಗ್ರಾಮೀಣ ಪ್ರದೇಶವಾದ ಮರಳಿ ಗ್ರಾಮದಲ್ಲಿ ಎಂ.ಎಸ್.ಎಂ.ಎಸ್ ಪದವಿ ಪೂರ್ವ ಕಾಲೇಜಿನ ಕಲಾ ಮತ್ತು ವಾಣಿಜ್ಯ ವಿಭಾಗದ ಒಟ್ಟು ವಿದ್ಯಾರ್ಥಿಗಳ ಪೈಕಿ ೭ ಡಿಸ್ಟಿಂಕ್ಷನ್, ೧೦ ಫಸ್ಟ್ ಕ್ಲಾಸ್, ೫ ದ್ವಿತೀಯ, ಉಳಿದ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಒಟ್ಟಾರೆ ಕಾಲೇಜಿನ ೮೫% ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಕಳೆದ ಬಾರಿ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿ ವಿದ್ಯಾರ್ಥಿಗಳು ಬಂದಿದ್ದರು, ಜೊತೆಗೆ ಎಂ.ಎಸ್.ಎಂ.ಎಸ್. ಸಂಸ್ಥೆಯಲ್ಲಿ ಓದಿರುವ ಹಲವಾರು ವಿದ್ಯಾರ್ಥಿಗಳು ಈಗಾಗಲೇ ಸರ್ಕಾರಿ ಇಲಾಖೆಗೆ ಸೇರಿಕೊಂಡು ತಮ್ಮ ಸೇವೆಯನ್ನು ನೀಡುತ್ತಿರುವುದು ನಮಗೆ ಸಂತಸ ತಂದಿದೆ ಎಂದು ಕಾಲೇಜಿನ ಆಡಳಿತ ಅಧಿಕಾರಿಗಳಾದ ವಿರೂಪಾಕ್ಷಯ್ಯ ಸ್ವಾಮಿ ಮತ್ತು ಬಸವರಾಜ್ ಸ್ವಾಮಿ ಕಾರ್ಯದರ್ಶಿ ಹೆಚ್.ಎಂ. ಶ್ರೀಮತಿ ಪಾರ್ವತಿ ಸಿದ್ದರಾಮಸ್ವಾಮಿ ತಿಳಿಸಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ೧೯೯೫-೯೬ನೇ ಸಾಲಿನಲ್ಲಿ ಈ ಸಂಸ್ಥೆಯನ್ನು ಮಲ್ಲಿಕಾರ್ಜುನ ಸ್ವಾಮಿಯವರು ಹುಟ್ಟು ಹಾಕಿದ್ದರು. ಮೊದಲ ಬಾರಿಗೆ ೨೦೧೨-೧೩ ರಲ್ಲಿ ಪಿಯು ಕಾಲೇಜ್ ಪ್ರಾರಂಭ ಮಾಡಿದಾಗ ಕೇವಲ ೩೫ ರಿಂದ ವಿದ್ಯಾರ್ಥಿಗಳು ಪ್ರಾರಂಭವಾಗಿದ್ದು ಇದೀಗ ಸಂಸ್ಥೆಯಲ್ಲಿ ೧೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗ್ರಾಮೀಣ ಭಾಗದಲ್ಲಿ ಓದುತ್ತಿರುವುದು ಮತ್ತು ಸಂಸ್ಥೆಗೆ ಒಳ್ಳೆಯ ಹೆಸರನ್ನು ವಿದ್ಯಾರ್ಥಿಗಳು ತಂದು ಕೊಟ್ಟಿರುವುದರಿಂದ ಅವರಿಗೆಲ್ಲ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರಾದ ಮಲ್ಲಿಕಾರ್ಜುನ್ ಸ್ವಾಮಿ ಅಭಿನಂದನೆಯನ್ನು ತಿಳಿಸಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಇಂತಹ ಒಂದು ಕಾಲೇಜು ಸ್ಥಾಪನೆ ಮಾಡಬೇಕೆಂಬ ಮಹತ್ ಕನಸ್ಸನ್ನು ಹೊತ್ತುಕೊಂಡಿದ್ದ ಸ್ವಾಮಿಗಳು, ಗ್ರಾಮೀಣ ಭಾಗದ ಮಕ್ಕಳಿಗೆ ಪ್ರೈಮರಿ, ಹೈಸ್ಕೂಲು, ಪಿಯು ಕಾಲೇಜು, ಡಿಗ್ರಿ ಕಾಲೇಜು, ಬಿ.ಎಡ್ ಕಾಲೇಜು, ಡಿಪ್ಲೋಮಾ ಕಾಲೇಜ್‌ಗಳಲ್ಲಿ ಈಗಾಗಲೇ ಸಾವಿರಾರು ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ಓದುತ್ತಿದ್ದು, ಮುಂದಿನ ದಿನಮಾನಗಳಲ್ಲಿ ಎಂ.ಎಸ್.ಎಂ.ಎಸ್ ಸಂಸ್ಥೆ ವತಿಯಿಂದ ಕಾನೂನು ಕಾಲೇಜು ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

ದ್ವಿತೀಯ ಪಿ.ಯು ಪರೀಕ್ಷೆಯಲ್ಲಿ ಗಂಗಾವತಿಯ ಸಂಕಲ್ಪ ಪಿಯು ಕಾಲೇಜಿನ ಶೇ. 76ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ

ಗಂಗಾವತಿ: ಏಪ್ರಿಲ್‌-08 ಮಂಗಳವಾರ ಪ್ರಕಟವಾದ ದ್ವಿತಿಯ ಪಿಯುಸಿ ಫಲಿತಾಂಶದಲ್ಲಿ ನಗರದ ಸಂಕಲ್ಪ ಸ್ವತಂತ್ರ ಪದವಿ ಪೂರ್ವ ಕಾಲೇಜಿಗೆ ಶೇ.76ರಷ್ಟು ಫಲಿತಾಂಶ ಬಂದಿದ್ದು, ಕಲಾ ವಿಭಾಗದಲ್ಲಿ ಜಂಬಣ್ಣ ಎಂಬ ವಿದ್ಯಾರ್ಥಿ, ವಾಣಿಜ್ಯ ವಿಭಾಗದಲ್ಲಿ ಐಶ್ವರ್ಯ ಎಂಬ ವಿದ್ಯಾರ್ಥಿನಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಕಲಾ ವಿಭಾಗದಲ್ಲಿ ಜಂಬಣ್ಣ ಮಾರೆಪ್ಪ ವಿಭೂತಿ ಶೇ.94.66ರಷ್ಟು (568ಅಂಕ), ದುರುಗೇಶ ಜಂಬಣ್ಣ ವಿಭೂತಿ ಶೇ.93.33 ರಷ್ಟು (560ಅಂಕ) ಹಾಗೂ ಹುಲಿಗೆಮ್ಮ ಕುರಿ ವೆಂಕಟೇಶ ಶೇ. 93. ರಷ್ಟು (558) ಅಂಕ ಪಡೆದುಕೊಂಡಿರುತ್ತಾರೆ.

ಅದೇರೀತಿ ವಾಣಿಜ್ಯ ವಿಭಾಗದಲ್ಲಿ ಐಶ್ವರ್ಯ ನಾಗೇಶ ಶೇ.93.33 (560ಅಂಕ), ಉಷಾರಾಣಿ ಶೇ.92.50 (555) ಹಾಗೂ ಸುಮಾ ಜಡಿಯಪ್ಪ ಶೇ. 92.33 ರಷ್ಟು (554 ಅಂಕ) ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ವಿಷಯವಾರು 100ಕ್ಕೆ 100 ಅಂಕಗಳನ್ನು ಕಾಲೇಜಿನಲ್ಲಿ ಒಟ್ಟು ಹನ್ನೆರಡು ಮಕ್ಕಳು ಪಡೆದುಕೊಂಡಿದ್ದು, ಕನ್ನಡದಲ್ಲಿ ಇಬ್ಬರು, ಇತಿಹಾಸ ವಿಷಯದಲ್ಲಿ ಆರು ಜನ, ರಾಜ್ಯಶಾಸ್ತ್ರ ದಲ್ಲಿ ಇಬ್ಬರು, ಶಿಕ್ಷಣಶಾಸ್ತ್ರ ನಾಲ್ಕು ವಿದ್ಯಾರ್ಥಿಗಳು ನೂರು ಅಂಕ ಪಡೆದಿದ್ದಾರೆ.

ಪರೀಕ್ಷೆ ತೆಗೆದುಕೊಂಡಿದ್ದ ಒಟ್ಟು 242 ವಿದ್ಯಾ ರ್ಥಿಗಳಲ್ಲಿ 183 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 44 ಮಕ್ಕಳು ಉನ್ನತ ಶ್ರೇಣಿ, 112-ಪ್ರಥಮದರ್ಜೆ, 22 ದ್ವಿತೀಯ ದರ್ಜೆ, ಐದು ಮಕ್ಕಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಪ್ರಾಂಶುಪಾಲ ಮಂಜುನಾಥ ಸ್ವಾಮಿ ತಿಳಿಸಿದ್ದಾರೆ.

ದಾರದಿಂದ ದಾರಿತೋರಿ, ನೀರಿನಿಂದ ಕಷ್ಟಕಾರ್ಪಣ್ಯ ಕಳೆಯುತ್ತಿದ್ದ ಶ್ರೀ ನವಣಕ್ಕಿ ನಾಗಪ್ಪ ತಾತನವರು: ಹೆಬ್ಬಾಳ ಶ್ರೀಗಳು

ಗಂಗಾವತಿ: ಗಂಗಾವತಿಯ ಸರ್ವ ಜನಾಂಗದ ದೈವೀ ಪುರುಷರಾದ ಪರಮಪೂಜ್ಯ ಶ್ರೀ ನವಣಕ್ಕಿ ನಾಗಪ್ಪ ತಾತನವರು ತಮ್ಮ ಮಂತ್ರಶಕ್ತಿಯಿಂದ ದಾರ ನೀಡಿ, ಬದುಕಿನ ದಾರಿ ತೋರಿಸುತ್ತಿದ್ದರು, ಜೊತೆಗೆ ಕಷ್ಟ, ಸಂಕೋಲೆಗಳನ್ನು ಹೊತ್ತುತಂದ ಭಕ್ತಾದಿಗಳಿಗೆ ಮಂತ್ರಿಸಿದ ನೀರು ನೀಡುವ ಮೂಲಕ ಅವರ ಕಷ್ಟಗಳನ್ನು ಕಳೆಯುತ್ತಿದ್ದರು ಎಂದು ಹೆಬ್ಬಾಳ ಬೃಹನ್ಮಠದ ಪೂಜ್ಯ ಶ್ರೀ ನಾಗಭೂಷಣ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.

ಅವರು ಏಪ್ರಿಲ್-೮ ಮಂಗಳವಾರ ಶ್ರೀ ನವಣಕ್ಕಿ ನಾಗಪ್ಪ ತಾತನವರ ಶಿಲಾ ಮೂರ್ತಿ ಪ್ರತಿಷ್ಠಾಪನೆಯನ್ನು ನೆರವೇರಿಸಿ ಮಾತನಾಡಿದರು. ನವಣಕ್ಕಿ ನಾಗಪ್ಪನವರ ೨೧ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರ ಶಿಲಾಮೂರ್ತಿ ಪ್ರತಿಷ್ಠಾಪನೆಗೈದಿರುವುದು ಸ್ತುತ್ಯಾರ್ಹವಾಗಿದ್ದು, ಕುರುಹಿನಶೆಟ್ಟಿ ಸಮಾಜದ ಶ್ರೀ ನವಣಕ್ಕಿ ನಾಗಪ್ಪ ತಾತನವರು ಒಬ್ಬ ದೈವೀ ಪುರುಷರಾಗಿ ಅಪಾರ ಸಂಖ್ಯೆಯ ಭಕ್ತ ಸಮೂಹವನ್ನು ಹೊಂದಿದ್ದರು. ಅವರು ಹಾವು ಕಡಿದರೆ, ಚೇಳು ಕಡಿದರೆ, ನಾಯಿ ಕಡಿದರೆ ಮಂತ್ರದ ಮೂಲಕ ದಾರಿ ಕಟ್ಟಿ ಗುಣಪಡಿಸುತ್ತಿದ್ದರು, ಅಷ್ಟಲ್ಲದೇ ಚರ್ಮರೋಗ, ವಿವಿಧ ಕಾಯಿಲೆಗಳನ್ನು ಮನೆ ಮದ್ದುಗಳ ಮೂಲಕ ಗುಣಪಡಿಸಿ, ಜನರ ಪ್ರೀತಿಗೆ ಪಾತ್ರರಾಗಿದ್ದರು. ಅವರು ದೈವಾಧೀನವಾದರೂ ಭಕ್ತಾದಿಗಳು ಅವರ ಗದ್ದುಗೆಗೆ ಭೇಟಿ ನೀಡಿ ಪೂಜೆ ಸಲ್ಲಿಸುವ ಮೂಲಕ ತಮ್ಮ ಕಷ್ಟಗಳನ್ನು ನಿವಾರಿಸಿಕೊಳ್ಳುತ್ತಿದ್ದಾರೆ. ಇಂತಹ ಒಬ್ಬ ದೈವೀ ಪುರುಷನನ್ನು ಹೊಂದಿದ್ದ ಗಂಗಾವತಿಯು ಪುಣ್ಯಭೂಮಿಯಾಗಿದೆ ಎಂದು ಹೇಳಿದರು.

ನಂತರ ತಾತನವರ ಆತ್ಮೀಯ ಭಕ್ತರಾದ ಮಂಜುನಾಥ ಕುರುಗೋಡು ಮಾತನಾಡಿ, ತಾತನವರ ಶಿಲಾ ಮೂರ್ತಿಯನ್ನು, ಪರಮ ಭಕ್ತರಾದ ಶ್ರೀಧರಗೌಡ ದಂಪತಿಗಳು ಕೊಡುಗೆ ಮಾಡಿದ್ದು ಹಾಗೂ ಹೆಬ್ಬಾಳ ಶ್ರೀಗಳ ಅಮೃತ ಹಸ್ತದಿಂದ ಶ್ರೀ ನವಣಕ್ಕಿ ನಾಗಪ್ಪನವರ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ನೆರೆವೇರಿಸಿರುವುದು ಅಪಾರ ಭಕ್ತ ಸಮೂಹಕ್ಕೆ ಹರ್ಷ ತಂದಿದೆ ಎಂದರು.

ನಂತರ ಪೂಜ್ಯ ಶ್ರೀ ನವಣಕ್ಕಿ ತಾತನವರ ಶಿಲಾಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು. ನೆರೆದ ಭಕ್ತಸಮೂಹಕ್ಕೆ ಅನ್ನಸಂತರ್ಪನೆ ವ್ಯವಸ್ಥೆ ಮಾಡಲಾಗಿತ್ತು.

ಈ ಶಿಲಾಮೂರ್ತಿ ಪ್ರತಿಷ್ಠಾಪನೆಯಲ್ಲಿ ಯುವ ಮುಖಂಡರಾದ ಸರ್ವೇಶ್ ಮಾಂತಗೊಂಡ, ನವಣಕ್ಕಿ ಕುಟುಂಬಸ್ಥರು ಸೇರಿದಂತೆ ತಾತನವರ ಭಕ್ತರಾದ ಲಕ್ಷ್ಮಣಪ್ಪ ಶಿರವಾರ, ಶ್ಯಾವಿ ತಿಪ್ಪಣ್ಣ, ಸುನೀತಾ ದಂಪತಿಗಳು, ವೈ.ಕುಬೇರಪ್ಪ, ಕೆ.ಬಸವರಾಜ, ಎಸ್.ಬಸವರಾಜ ಉಪ್ಪಾರ ಕೃಷ್ಣ, ತಾಂದಳೆ ಕುಟುಂಬ ಸದಸ್ಯರು ಹಾಗೂ ನೂರಾರು ಭಕ್ತರು ಪಾಲ್ಗೊಂಡು ತಾತನ ಕೃಪೆಗೆ ಪಾತ್ರರಾಗಿ ಆಶೀರ್ವಾದ ಪಡೆದು, ಪ್ರಸಾದ ಸ್ವೀಕರಿಸಿದರು.