ಭಾರತೀಯ ಜ್ಞಾನ ಸಂಸ್ಕೃತಿಯನ್ನು ಜಗದಗಲ ಪಸರಿಸಿದ ವೀರಸನ್ಯಾಸಿ ಸ್ವಾಮಿವಿವೇಕಾನಂದರು-ಪ್ರೊ.ಕರಿಗೂಳಿ
ಇಂದು ದಿನಾಂಕ 12-01-2026 ರಂದು ಚಿಲಕೂರಿ ನಾಗೇಶ್ವರರಾವ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಶ್ರೀರಾಮನಗರದಲ್ಲಿ ಸ್ವಾಮಿ ವಿವೇಕಾನಂದರವರ 163 ನೇ ಜನುಮದಿನದ ಅಂಗವಾಗಿ ರಾಷ್ಟ್ರೀಯ ಯುವ ದಿನಾಚರಣೆಯನ್ನು ಆಚರಿಸಲಾಯಿತು. ಪ್ರಾಚಾರ್ಯರಾದ ಪ್ರೊ. ಕರಿಗೂಳಿ ಅವರು ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ವಿಶ್ವಚೇತನ, ವೀರಸನ್ಯಾಸಿ, ಆಧ್ಯಾತ್ಮ ವಿಜ್ಞಾನಿ, ಯುವಜನಪ್ರೇಮಿ, ಭಾರತೀಯತೆಯ ಹರಿಕಾರರಾದ ಸ್ವಾಮಿ ವಿವೇಕಾನಂದರ ಉದಾತ್ತ ಚಿಂತನೆಗಳನ್ನು ಬಣ್ಣಿಸಿದರು. ಅಂತಾರಾಷ್ಟ್ರೀಯ ಭೌತವಿಜ್ಞಾನಿಗಳಿಗೂ ಸವಾಲಾಗುವಂತಹ ವಿಚಾರಗಳನ್ನು ಸಮರ್ಥವಾಗಿ ಚಿಕ್ಯಾಗೋದ ವಿಶ್ವಧರ್ಮ ಸಮ್ಮೇಳನದಲ್ಲಿ ಮಂಡಿಸಿ ಶತಮಾನವಾದರೂ ಕೂಡ ಇoದಿಗೂ…
