ನಾಟಕಕಾರ ಗೊರೂರು ಅನಂತರಾಜು ಅವರಿಗೆ ಕಲಾಭೂಷಣ ಪ್ರಶಸ್ತಿ

ಹಾಸನ ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿ(ರಿ)ಯ ಸರ್ವ ಸದಸ್ಯರ 8ನೇ ವಾರ್ಷಿಕ ಮಹಾಸಭೆಯು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಜರುಗಿತು.ಸಭೆಯಲ್ಲಿ ಇತ್ತೀಚೆಗೆ ಕೀರ್ತಿಶೇಷರಾದ ಹಾಸನದ ಹಿರಿಯ ಕಲಾವಿದರಾದ ಚೆಲುವೆಗೌಡರು, ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್.ಎಂ. ಶಿವಣ್ಣ, ಕಾದಂಬರಿಕಾರರಾದ ಶ್ರೀ ಎಸ್. ಎಲ್ ಭೈರಪ್ಪ, ಗಾಯಕರಾದ ಹಾಸನ ಬಾಬು ಹಾಗೂ ಹರಿಕಥಾ ವಿದ್ವಾಂಸರು ಹಾಗೂ ಪೌರಾಣಿಕ ರಂಗ ನಿರ್ದೇಶಕರಾದ ಚಂದ್ರಚಾರ್ ಇವರುಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಭೆಯ ಆಗುಹೋಗುಗಳ ವರದಿಯ ನಂತರ ಕಲಾವಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಹಲವು ವರ್ಷಗಳಿಂದ ರಂಗಭೂಮಿಯಲ್ಲಿ ಸೇವೆ ಸಲ್ಲಿಸುತ್ತಿರುವ 40 ಕಲಾವಿದರಿಗೆ ಕಲಾಭೂಷಣ ಪ್ರಶಸ್ತಿಯನ್ನಿತ್ತು ಗೌರವಿಸಲಾಯಿತು. ಸಮಿತಿಯ ಶ್ರೇಯೋಭಿವೃದ್ಧಿಗೆ ಸದಸ್ಯರುಗಳೊಡನೆ ಚರ್ಚಿಸಿ ಸಲಹೆಗಳನ್ನು ಪಡೆದು ಅನಂತರ ಅಧ್ಯಕ್ಷರಾದ ರವಿಕುಮಾರ್ ಬಿದರೆಯವರು ಮಾತನಾಡಿ ಇನ್ನೂ ಉನ್ನತ ಮಟ್ಟದಲ್ಲಿ ಸಂಘವನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಸದಸ್ಯರೆಲ್ಲರ ಸಹಕಾರವನ್ನು ಕೋರುತ್ತಾ ತಮ್ಮ ಅಧ್ಯಕ್ಷೀಯ ಭಾಷಣ ಮಾಡಿದರು.ಮಧ್ಯಾಹ್ನ ಊಟದ ನಂತರ ರಂಗಗೀತೆಗಳ ಕಾರ್ಯಕ್ರಮವನ್ನು ನಡೆಸಲಾಯಿತು.

ವೇದಿಕೆಯಲ್ಲಿ ಅಧ್ಯಕ್ಷರಾದ ಬಿದರೆ ರವಿಕುಮಾರ್, ಕಾರ್ಯದರ್ಶಿ ವೇದ ಶಿವಕುಮಾರ್, ಖಜಾಂಚಿ ರಮೇಶ್ ಗೌಡಪ್ಪ, ಗೌರವಾಧ್ಯಕ್ಷರಾದ ಶೇಖರಪ್ಪ, ಉಪಾಧ್ಯಕ್ಷರಾದ ಶ್ರೀಕಂಠಪ್ಪ, ಸೋಮಶೇಖರ್, ಕಾರ್ಯಾಧ್ಯಕ್ಷರಾದ ನಾಗಮೋಹನ್, ಸಂಘಟನಾ ಕಾರ್ಯದರ್ಶಿ ಪ್ರದೀಪ್ ಗವೇನಹಳ್ಳಿ, ಕಾನೂನು ಸಲಹೆಗಾರರಾದ ಮಹೇಂದ್ರ ಹಾಗೂ ಸಲಹೆಗಾರರಾದ ರಂಗಸ್ವಾಮಿ ಕೆ ಕೆ, ಟಿ ವಿ, ನಾಗರಾಜ್, ನಾಗರಾಜ್ ಸಿ ಜೆ, ತೇಜೂರು ಸೋಮಣ್ಣ ದ್ಯಾವೇಗೌಡ, ಕೇಶವ ಜಿ ಜಿ. ಮುಂತಾದವರು ಉಪಸ್ಥಿತರಿದ್ದರು.

ೋಮಶೇಖರ್ ಸ್ವಾಗತಿಸಿ, ಸಾವಿತ್ರಿ ಗಂಗಾಧರ್ ಪ್ರಾರ್ಥಿಸಿದರು, ಶಶಿಕಾಂತ್ ನಿರೂಪಿಸಿ, ನಾಗಮೋಹನ್ ವಂದಿಸಿದರು.

ಸುಂದರ ನವಿಲಿಗೆ ಚಂದದ ಗರಿ ಪುಸ್ತಕ ಲೋಕಾರ್ಪಣೆ

ಅರಸೀಕೆರೆ: ರೋಟರಿ ಭವನದಲ್ಲಿ ಅಕ್ಟೋಬರ್‌-11 ಶನಿವಾರ ಸುಂದರ ನವಿಲಿಗೆ ಚಂದದ ಗರಿ ಪುಸ್ತಕ ಲೋಕಾರ್ಪಣಿ ಸಮಾರಂಭವು ನೆರವೇರಿತು. ಕಾತ್ಯಾಯಿನಿ ತೇವರಿಮಠ ನಿರೂಪಣೆ, ಶಫೀತಾಬೇಗಂರಿಂದ ಪ್ರಾರ್ಥನೆ , ಬೇಲೂರು ಮಧುಮಾಲತಿ ರುದ್ರೇಶ್ ರಿಂದ ಸ್ವಾಗತ ನಂತರ ಪರಮೇಶ್ ಕಸಾಪ ಅರಸೀಕೆರೆ ಇವರು ಉದ್ಘಾಟನಾ ನುಡಿಯಲ್ಲಿ ಸಾಹಿತ್ಯವು ವಿಶಾಲವಾದ ‌ ಪ್ರಕ್ರಿಯವಾಗಿದೆ. ಇರುವ ಸ್ಥಿತಿಯನ್ನ ವೈಭವೀಕರಿಸಿ ಕಥೆ, ಕವನ , ನಾಟಕ ಹೀಗೆ ವಿವಿಧ‌ ಪ್ರಕಾರವು ರಚಿಸುವುದಾಗಿದೆ ಎಂದು‌ ತಾವು ನಾಟಕದಲ್ಲಿ ನಟಿಸುವಾಗ ಆದ ಕೆಲವು ಅನುಭವಗಳನ್ನು ಹಂಚಿಕೊಂಡರು.

ಪ್ರಾಸ್ತಾವಿಕ ‌ ನುಡಿಯಲ್ಲಿ ಅರಸೀಕೆರೆ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಪದ್ಮಮೂರ್ತಿಯವರು ಲೇಖಕಿ ಸಾವಿತ್ರಮ್ಮ ಓಂಕಾರ್ ಅವರು ‌ ಸಾಹಿತ್ಯದಲ್ಲಿ ನಡೆದುಬಂದ ಹೆಜ್ಜೆಗಳನ್ನ ಹೇಳಿ ಅಭಿನಂದನೆ ಸಲ್ಲಿಸಿದರು. ಹಾಸನದ ಸಾಹಿತಿಗಳು ಗೊರೂರು ಅನಂತರಾಜುರವರು ಕೃತಿ ಪರಿಚಯವನ್ನ ಸುದೀರ್ಘವಾಗಿ ಮಾಡಿಕೊಡುತ್ತಾ ಅವರ ಅನೇಕ ಕೃತಿಗಳನ್ನ ಪರಿಚಯಿಸಿಕೊಟ್ಟಿರುವ ಕೃತಿಯ ಲೇಖಕಿ ಸಾವಿತ್ರಮ್ಮ ಓಂಕಾರ್ ಅವರ ಕಾರ್ಯನ ಬಗ್ಗೆ ಶ್ಲಾಘಿಸಿದರು.

ಕೃತಿಯ ‌ ಲೇಖಕಿ ತಮ್ಮ ಮನದ‌‌ ಮಾತಿನಲ್ಲಿ ಬಂದ‌ ಪ್ರತಿಯೊಬ್ಬರಿಗೂ ಕೃತಿಯಲ್ಲಿರುವ ಎಲ್ಲಾ ೭೪ಜನ ಸಾಧಕರ ಬಗ್ಗೆ ಪ್ರಶಂಸೆ ಮತ್ತು ಅಭಿನಂದನೆ ಸಲ್ಲಿಸಿದರು. ನಾಗರತ್ನ ರಾಜಶೇಖರ್ ರವರು ಕಾರ್ಯಕ್ರಮದ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿ ಸ್ವರಚಿತ ಚುಟುಕು ವಾಚನ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹಾಸನದ ಪತ್ರಕರ್ತರು,‌ ಕಸಾಪ‌‌ ಮಾಜಿ‌ ಅಧ್ಯಕ್ಷರು ‌ ಉದಯರನಿ ಮಾತನಾಡಿ ಸಾಹಿತಿಗಳಿಗಾಗೇ ಒಂದು ಪುಟವನ್ನು ಮೀಸಲಿಟ್ಟ ಪ್ರತಿನಿಧಿ ಪತ್ರಿಕೆಯ ಬಗ್ಗೆ ತಿಳಿಸಿದರು. ಕೃತಿಯ‌ ಬಗ್ಗೆ ಪ್ರಶಂಸನೀಯ ನುಡಿಗಳನ್ನು‌ ಆಡಿ ಪ್ರತಿಯೊಬ್ಬ ಸಾಹಿತಿಗಳನ್ನು ಉತ್ತೇಜಿಸಿ ಮಾತನಾಡಿದರು.

ಕರ್ನಾಟಕ ರಾಜ್ಯ ಬರಹಗಾರರ ಸಂಘದ ಜಿಲ್ಲಾಧ್ಯಕ್ಷರು ಸುಂದರೇಶ್ ಡಿ. ಉಡುವಾರೆ, ಚನ್ನರಾಯಪಟ್ಟಣ ತಾಲ್ಲೂಕು ಅಧ್ಯಕ್ಷರು ಡಾ. ಬರಾಳು ಶಿವರಾಮ ವೇದಿಕೆಯಲ್ಲಿದ್ದು ಮಾತನಾಡಿದರು.

ಪುಸ್ತಕದಲ್ಲಿರುವ ಸಾಧಕರುಗಳಾದ ಮಧುಮಾಲತಿ ರುದ್ರೇಶ್, ಮಾಲಾ ಚಲುವನಹಳ್ಳಿ, ಸುಭದ್ರಾ, ಶಫೀತಾ ಬೇಗಂ, ಪ್ರೇಮಲತಾ ಸೋಮಶೇಖರ್, ಸುಧಾ ಬಾಣಾವರ. ವಿಶ್ವಾಸ್ ಗೌಡ. ಮಲ್ಲೇಶ್, ಉಮೇಶ್ ಹೊಸಹಳ್ಳಿ, ರುದ್ರೇಶ್, ಚಂದ್ರು ಬಾಣಾವರ, ಡಾ. ಹರೀಶ್ ಉಪಾನ್ಯಾಸಕರು, ಮುಂತಾದವರು ಚುಟುಕು ವಾಚನ ಮಾಡಿದರು. ಕಾರ್ಯಕ್ರಮದಲ್ಲಿ ಬಂದ ಪ್ರತಿಯೊಬ್ಬರಿಗೂ ಪುಸ್ತಕದ ಜೊತೆ ಸನ್ಮಾನ ಸಲ್ಲಿಸಲಾಯಿತು.

ಡಾ|| ಶಿವಕುಮಾರ ಮಾಲಿಪಾಟೀಲ್ ರವರಿಗೆ ಹೊಸಪೇಟೆಯಲ್ಲಿ ಇಂದಿರಾಗಾಂಧಿ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ.

ಗಂಗಾವತಿ: ಲಯನ್ಸ್ ಕ್ಲಬ್ ಗಂಗಾವತಿ ಅಧ್ಯಕ್ಷರು, ದಂತವೈದ್ಯರು, ಪರಿಸರ ಪ್ರೇಮಿಗಳು, ಸಾಹಿತಿಗಳಾದ ಡಾ|| ಶಿವಕುಮಾರ ಮಾಲಿಪಾಟೀಲ್ ಅವರಿಗೆ ಅಕ್ಟೋಬರ್-೧೦ ರಂದು ಹೊಸಪೇಟೆಯಲ್ಲಿ ನಡೆದ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಇಂದಿರಾಗಾಂಧಿ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ ಲಭಿಸಿದೆ.

ಈ ಪ್ರಶಸ್ತಿಯನ್ನು ಅರಣ್ಯ ಸಚಿವರಾದ ಈಶ್ವರ ಖಂಡ್ರೆ, ಮಂಡಳಿಯ ಅಧ್ಯಕ್ಷರಾದ ಪಿ.ಎಂ. ನರೇಂದ್ರಸ್ವಾಮಿ, ಕೊಪ್ಪಳ ಸಂಸದರಾದ ರಾಜಶೇಖರ ಹಿಟ್ನಾಳ್, ಬಳ್ಳಾರಿ ಸಂಸದರಾದ ಇ. ತುಕಾರಾಂ, ವಿಜಯನಗರ ಶಾಸಕ ಹೆಚ್.ಆರ್. ಗವಿಯಪ್ಪ, ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಸೇರಿದಂತೆ ಹಲವಾರು ಗಣ್ಯವ್ಯಕ್ತಿಗಳ ಸಮ್ಮುಖದಲ್ಲಿ ನೀಡಲಾಗಿರುತ್ತದೆ.

ಡಾ|| ಶಿವಕುಮಾರ ಮಾಲಿಪಾಟೀಲ್ ಅವರು ವೃತ್ತಿಯಲ್ಲಿ ದಂತವೈದ್ಯರಾಗಿ ಸಾಮಾಜಿಕ ಕಳಕಳಿ ಹಾಗೂ ನಿಸ್ವಾರ್ಥತೆಯಿಂದ, ಇತಿಹಾಸ ಸಂಶೋಧಕರಾದ ಡಾ. ಶರಣಬಸಪ್ಪ ಕೋಲ್ಕಾರ್, ಗಂಗಾವತಿ ಪ್ರಾಣೇಶ್, ಕಳಕನಗೌಡ ಪಾಟೀಲ್ ಹಾಗೂ ಇತರ ಹಿರಿಯರ ಮಾರ್ಗದರ್ಶನದಲ್ಲಿ ಹಲವಾರು ಸಮಾಜಮುಖಿ, ಪರಿಸರ ಸ್ನೇಹಿ ಕಾರ್ಯಗಳನ್ನು ಮಾಡಿರುತ್ತಾರೆ.

ಈ ಪ್ರಶಸ್ತಿಯನ್ನು ಸ್ವೀಕರಿಸಿದ ಡಾ|| ಶಿವಕುಮಾರ ಮಾಲಿಪಾಟೀಲ್‌ ಮಾತನಾಡಿ, ನಮ್ಮ ಈ ಸೇವೆಗೆ ಗಂಗಾವತಿ ಚಾರಣ ಬಳಗ ಸದಸ್ಯರಾದ ಮೈಲಾರಪ್ಪ ಬೂದಿಹಾಳ, ಪ್ರಹ್ಲಾದ ಕುಲಕರ್ಣಿ, ರಮೇಶ ಗಬ್ಬೂರು, ರಾಮನಾಥ ಭಂಡಾರಕರ್, ಸುರೇಶ ಸಿಂಗನಾಳ, ಬದರಿನಾಥ ಸಿರಿಗೇರಿ, ಡಾ. ಬದರಿ ಪ್ರಸಾದ, ಶ್ರೀಮತಿ ಸಿ. ಮಹಾಲಕ್ಷಿö್ಮÃ, ಉಲ್ಲಾಸ್, ಶಾಹೀನ್ ಕೌಸರ್, ಮಂಜುನಾಥ ಗುಡ್ಲಾನೂರು, ಆಂಜನೇಯ ಟಿ., ಎನ್. ಸೂರ್ಯನಾರಾಯಣ, ಹನುಮೇಶ ಭಾವಿಕಟ್ಟಿ, ಮಹಮ್ಮದ ರಫಿ, ಆನಂದ ಲಕ್ಕಿ, ಮಂಜುನಾಥ ಕಟ್ಟಿಮನಿ, ಜಗದೀಶ ಮಾಲಿಪಾಟೀಲ್, ಹರನಾಯಕ, ಶರಣಪ್ಪ ಹಡಪದ ಹೀಗೆ ಸಮಾನ ಮನಸ್ಕರ ಸಹಕಾರದಿಂದ ದುರ್ಗಮ್ಮನ ಹಳ್ಳ ಸ್ವಚ್ಛತಾ ಆಂದೋಲನ, ಪ್ಲಾಸ್ಟಿಕ್ ಮುಕ್ತ ಗಂಗಾವತಿ ಅಭಿಯಾನ, ಅರಣ್ಯ ಪ್ರದೇಶದಲ್ಲಿ ಹೊಂಡಗಳ ನಿರ್ಮಾಣ, ಸ್ಮಾರಕಗಳ ಸ್ವಚ್ಛತಾ ಕಾರ್ಯ, ಸೂರ್ಯನಾಯಕನ ಕೆರೆ ಅಭಿವೃದ್ಧಿ, ಹಲವಾರು ವನಮಹೋತ್ಸವ ಕಾರ್ಯಕ್ರಮಗಳು ಹೀಗೆ ಹತ್ತಾರು ಅಭಿವೃದ್ಧಿಪರ ಕಾರ್ಯಗಳನ್ನು ಮಾಡಲಾಗಿದೆ ಎಂದರು.

ಇವರ ಈ ಸಾಮಾಜಿಕ, ಪರಿಸರಸ್ನೇಹಿ ಕಾಳಜಿಯುತ ಕಾರ್ಯಗಳನ್ನು ಗುರುತಿಸಿದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಈ ಪ್ರಶಸ್ತಿ ನೀಡಿ ಸನ್ಮಾನಿಸಿರುವುದಕ್ಕಾಗಿ ಗಂಗಾವತಿ ಚಾರಣ ಬಳಗವು ಡಾ|| ಶಿವಕುಮಾರ್ ಅವರಿಗೆ ಅಭಿನಂದನೆಗಳನ್ನು ತಿಳಿಸಿದೆ.

12 ರಂದು ಜಿ ಹಂಪಣ್ಣ ಹೊಸ್ಕೇರಾ ಲಯನ್ಸ್ ಕಣ್ಣಿನ ಆಸ್ಪತ್ರೆ ಲೋಕಾರ್ಪಣೆ… ಹಲವು ದಶಕಗಳ ಕನಸು ನನಸು… ಎಂ.ಜೆ.ಎಫ್ ಲ. ಟಿ ರಾಮಕೃಷ್ಣ.

ಗಂಗಾವತಿ: ಸಾಮಾಜಿಕ ಸೇವಾ ಸಂಸ್ಥೆಗಳಲ್ಲಿ ಒಂದಾದ ಲಯನ್ಸ್ ಕ್ಲಬ್ ಗಂಗಾವತಿ, ಲಯನ್ಸ್ ಚಾರಿಟೇಬಲ್ ಟ್ರಸ್ಟ್ ಇದರ ಹಲವು ದಶಕಗಳ ಕನಸು ಅಕ್ಟೋಬರ್‌-12 ರಂದು ನೆರವೇರಲಿದ್ದು,  ಜಿ ಹಂಪಣ್ಣ ಹೊಸ್ಕೇರಾ ಲಯನ್ಸ್ ಕಣ್ಣಿನ ಆಸ್ಪತ್ರೆಯು ಕಂಪ್ಲಿ ರಸ್ತೆಯಲ್ಲಿ ನಿರ್ಮಿಸಲಾದ ನೂತನ ಕಟ್ಟಡದ ಉದ್ಘಾಟನೆ ಜರುಗಲಿದೆ ಎಂದು ಲಯನ್ಸ್ ಕಣ್ಣಿನ ಆಸ್ಪತ್ರೆ ಸಮಿತಿಯ ಅಧ್ಯಕ್ಷ ಎಂ.ಜೆ.ಎಫ್‌ ಲ. ಟಿ. ರಾಮಕೃಷ್ಣ ಹೇಳಿದರು.

ಅವರು ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಅಮಂತ್ರಣ ಪತ್ರಿಕೆಯನ್ನು ಉದ್ಘಾಟಿಸಿ ಮಾತನಾಡಿ ಅಂತರಾಷ್ಟ್ರೀಯ ಸಂಸ್ಥೆಯಾದ ಲಯನ್ಸ್ ಕ್ಲಬ್ ಗಂಗಾವತಿ ಹಿರಿಯ ಸದಸ್ಯರಾದ ಡಾ||  ಜಿ. ಚಂದ್ರಪ್ಪ, ಡಾ|| ಎ. ಸೋಮರಾಜು, ಡಾ|| ಮಾಧವ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ನೂತನ ಕಣ್ಣಿನ ಆಸ್ಪತ್ರೆಯನ್ನು ಉದ್ಘಾಟಿಸಲಾಗುತ್ತಿದ್ದು ಇದರ ಸದುಪಯೋಗವನ್ನು ಸಮಾಜದಲ್ಲಿನ ಬಡವರು ವಯಸ್ಸಾದವರು ಪಡೆದುಕೊಳ್ಳಬೇಕೆಂದು ಹೇಳಿದರು.

ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ|| ಶಿವಕುಮಾರ್ ಮಾಲಿಪಾಟೀಲ್ ಮಾತನಾಡಿ ಕಳೆದ ಹಲವು ವರ್ಷಗಳಿಂದ ಪೂರ್ವ ಪ್ರಾಥಮಿಕ ಶಾಲೆಯಿಂದ ಹಿಡಿದು, ಪಿಯುಸಿ ಕಾಲೇಜು ಹಾಗೂ ಬುದ್ಧಿಮಾಂದ್ಯ ಮಕ್ಕಳಿಗೆ ವಸತಿ ಸಹಿತ ಶಿಕ್ಷಣ ಹಾಗೂ ಉಚಿತ ಆರೋಗ್ಯ ಶಿಬಿರಗಳನ್ನು ನಡೆಸುತ್ತಾ ಬರಲಾಗಿದ್ದು. ಅಂದಾಜು 5 ಕೋಟಿ ರೂ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಾ|| ಜಿ. ಚಂದ್ರಪ್ಪ, ಡಾ|| ಎ. ಸೋಮರಾಜು, ಲಯನ್ಸ್‌ ಕ್ಲಬ್‌ ಕಾರ್ಯದರ್ಶಿ ಜಂಬಣ್ಣ ಐಲಿ, ಖಜಾಂಚಿಯಾದ ಶಿವಪ್ಪ ಗಾಳಿ, ಪ್ರಾಚಾರ್ಯ ಅಭಿಷೇಕ್, ಶೇಷಗಿರಿ ರಾವ್ ಸೇರಿದಂತೆ ಇತರರು ಮಾತನಾಡಿದರು.

ಕರ್ನಾಟಕ ರಾಜ್ಯ ಬರಹಗಾರರ ಸಂಘದ ಹಾಸನ ಜಿಲ್ಲಾ ಘಟಕದ ಸಂಚಾಲಕರಾಗಿ ಶ್ರೀಮತಿ ಇಂದಿರಾ ಲೋಕೇಶ್ ಆಯ್ಕೆ.

ಹಾಸನ: ಕರ್ನಾಟಕ ರಾಜ್ಯ ಬರಹಗಾರರ ಸಂಘವು ಒಂದು ನೋಂದಾಯಿತ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆಯಾಗಿದ್ದು, ಕೇಂದ್ರ ಕಛೇರಿ ಹೂವಿನ ಹಡಗಲಿಯಾಗಿದ್ದು ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾ ಘಟಕಗಳನ್ನು, ತಾಲ್ಲೂಕು ಘಟಕಗಳನ್ನು ಹೊಂದಿದೆ. ಅಲ್ಲದೇ ಹೊರ ರಾಜ್ಯದಲ್ಲೂ ತನ್ನ ಘಟಕಗಳನ್ನು ವಿಸ್ತರಿಸಿಕೊಂಡು ಈಗಾಗಲೇ ಹಲವಾರು ಸಾಹಿತ್ಯ ಕಾರ್ಯಕ್ರಮ ನಡೆಸಿಕೊಂಡು ಬಂದಿದೆ. ಹಾಸನ ಜಿಲ್ಲಾ ಘಟಕವು ರಾಜ್ಯದಲ್ಲೆ ಅತ್ಯುತ್ತಮವಾದ ನಾಡು ನುಡಿ ಕಲೆ ಸಾಹಿತ್ಯ ಕವಿ ಕಾವ್ಯ ಗಾಯನ ಕಲಾ ಕುಂಚ ಹೀಗೆ ವಿಭಿನ್ನ ಕಾರ್ಯಕ್ರಮಗಳನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಹಲವಾರು ರಾಜ್ಯ ಹಾಗೂ ಜಿಲ್ಲಾ ಪ್ರಶಸ್ತಿಗಳನ್ನು ನೀಡುತ್ತಾ ಎಲೆಮರೆಕಾಯಿಯಂತಿರುವ ನೂರಾರು ಪ್ರತಿಭೆಗಳನ್ನು ಗುರುತಿಸುತ್ತಾ ಬಂದಿದೆ.

ಪ್ರಸ್ತುತ ಕರ್ನಾಟಕ ರಾಜ್ಯ ಬರಹಗಾರರ ಸಂಘ ಹಾಸನ ಜಿಲ್ಲಾ ಘಟಕದ ಸಂಚಾಲಕರಾನ್ನಾಗಿ ನೇಮಿಸಿ ರಾಜ್ಯಾಧ್ಯಕ್ಷರಾದ ಶ್ರೀ ಮಧುನಾಯ್ಕ ಲಂಬಾಣಿ ಅವರು ಅನುಮೋದನೆ ಮಾಡಿದ್ದಾರೆ. ಇಂದಿರಾ ಲೋಕೇಶ್ ರವರು ಸರಕಾರಿ ಪ್ರೌಢಶಾಲೆ ಬೆಳಗೋಡು ಸಕಲೇಶಪುರ ತಾಲೂಕು ಹಿಂದಿ ಭಾಷಾ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಹವ್ಯಾಸ ಕವನ, ಕಥೆ, ಲೇಖನ ಹಾಗೂ ಪ್ರಬಂಧಗಳ ರಚನೆ ಆಗಿರುತ್ತದೆ. ಜಿಲ್ಲಾ ಮಟ್ಟದ ಕವಿ ವಿಭೂಷಣ, ರಾಜ್ಯ ಮಟ್ಟದ ಕನ್ನಡ ರತ್ನ, ರಾಜ್ಯಮಟ್ಟದ ಕವಿರತ್ನ, ರಾಜ್ಯ ಮಟ್ಟದ ಕರುನಾಡು ಸಿರಿ ಸಂಪದ ಸಾಹಿತ್ಯ ಸೇವಾ ಪ್ರಶಸ್ತಿ, ಡಾ. ಪುನೀತ್ ರಾಜ್ ಕುಮಾರ್ ಪುರಸ್ಕಾರ, ಸಾಹಿತ್ಯ ಸೌರಭ, ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ, ರಾಜ್ಯ ಮಟ್ಟದ ರಾಷ್ಟ್ರ ಭಾಷಾ ಸೇವಾ ರತ್ನ ಪುರಸ್ಕಾರ, ಹೀಗೆ ಹತ್ತು ಹಲವು ಪ್ರಶಸ್ತಿಗಳನ್ನು ಗಳಿಸಿರುತ್ತಾರೆ.

ಹಾಸನ ಜಿಲ್ಲಾ ಅಧ್ಯಕ್ಷರಾದ ಸುಂದರೇಶ್ ಡಿ.ಉಡುವಾರೆ, ಗೌರವಾಧ್ಯಕ್ಷರು ಶ್ರೀ ವೆಂಕಟೇಶ.. ಉದಯ ವರದಿ ಪತ್ರಿಕೆಯ ಸಂಪಾದಕರು ಹಾಸನ, ಡಾ.ಲೋಕೇಶ ಉಪನ್ಯಾಸಕರು ಹೊಳೆನರಸೀಪುರ, ಡಾ. ಬರಾಳು ಶಿವರಾಮ, ಚನ್ನರಾಯಪಟ್ಟಣ ತಾಲ್ಲೂಕು. ಕಾರ್ಯದರ್ಶಿ ದಿಬ್ಬೂರು ರಮೇಶ, ಸಂಘಟನಾ ಕಾರ್ಯದರ್ಶಿ, ಶಿವಕುಮಾರ ಆರ್. ವಿಶ್ವಾಸ್ ಡಿ. ಗೌಡರು ಸಕಲೇಶಪುರ ತಾ. ಅಧ್ಯಕ್ಷರು. ಪರಮೇಶ್ ಮಡಬಲು. ಗಿರಿಜಾ ನಿರ್ವಾಣಿ. ರಾಣಿ ಚರಾಶ್ರಿ. ಬೋರೇಗೌಡರು ಅರಸೀಕೆರೆ. ಕಿರಣ್ ಅಧ್ಯಕ್ಷರು ಚುಸಾಪ ಬೇಲೂರು. ಎಸ್. ಎಸ್. ಪುಟ್ಟೇಗೌಡರು ಅಧ್ಯಕ್ಷರು ಅರಕಲಗೂಡು ತಾ. ಹಾಗು ಜಿಲ್ಲೆಯ ಎಲ್ಲಾ ತಾಲೂಕು ಅಧ್ಯಕ್ಷರು ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಎಸ್.ಎಫ್.ಐ ನೂತನ ಕೊಪ್ಪಳ ಜಿಲ್ಲಾ ಸಮಿತಿ ಪದಾಧಿಕಾರಿಗಳ ಆಯ್ಕೆ.

ಗಂಗಾವತಿ: ಅಕ್ಟೋಬರ್-8 ರಂದು ಗಂಗಾವತಿ ನಗರದಲ್ಲಿ ನಡೆದ ಜಿಲ್ಲೆಯ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗಾಗಿ ನಡೆದ ಎಸ್.ಎಫ್.ಐ ಜಿಲ್ಲಾ ಸಮಾವೇಶದಲ್ಲಿ ನೂತನ ಜಿಲ್ಲಾ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಜಿಲ್ಲಾಧ್ಯಕ್ಷರಾಗಿ ಶಿವುಕುಮಾರ್ ಈಚನಾಳ್, ಜಿಲ್ಲಾ ಕಾರ್ಯದರ್ಶಿಯಾಗಿ ಬಾಲಾಜಿ ಚಳ್ಳಾರಿ, ಉಪಾಧ್ಯಕ್ಷರಾಗಿ ನಾಗರಾಜು ಯು, ಹನುಮೇಶ್ ಮ್ಯಾಗೇಡಿ, ಷರೀಫ್ ಎಂ.ಪಿ., ಪೂಜಾ ಕೊಪ್ಪಳ, ಜಂಟಿ ಕಾರ್ಯದರ್ಶಿಗಳಾಗಿ ರೋಜಾ ಬಿ., ದರ್ಶನ್ ಹೊಸ್ಕೇರ, ಬಸಯ್ಯ ಹಿರೇಮಠ್, ಸದಸ್ಯರಾಗಿ ಮಾರುತಿ ಕನಕಗಿರಿ, ರಮೇಶ್ ಅಗಸಿಮುಂದಿನ ಕುಷ್ಟಗಿ, ಹನುಮೇಶ್ ಚಳ್ಳಾರಿ, ದೊಡ್ಡಬಸವ ಕುಷ್ಟಗಿ, ರಾಜು ಕೊಪ್ಪಳ, ಮೌನೇಶ್ ಕುಷ್ಟಗಿ, ದೀಪಾ ಚಲವಾದಿ, ವೈಶಾಲಿ ಹಣವಾಳ್, ಲಕ್ಷö್ಮಣ ಹೊಸಗುಡ್ಡ, ಶರಣಬಸವ. ಬಿ ಆಯ್ಕೆಯಾದರು.

ಈ ವೇಳೆ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿಯವರು, ಕೊಪ್ಪಳ ಜಿಲ್ಲೆಯಲ್ಲಿ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತದಲ್ಲಿದೆ, ಶಿಕ್ಷಣದ ಖಾಸಗೀಕರಣ ಹೆಚ್ಚುತ್ತಿದೆ. ಕನ್ನಡ ಸರ್ಕಾರಿ ಶಾಲಾ ಕಾಲೇಜುಗಳಿಗೆ ಮೂಲಭೂತ ಸೌಕರ್ಯಗಳಿಲ್ಲ, ಸೂಸಜ್ಜಿತ ಕಟ್ಟಡಗಳಿಲ್ಲ, ವಿದ್ಯಾರ್ಥಿಗಳ ಅನುಗುಣವಾಗಿ ಹಾಸ್ಟೆಲ್ ಸೌಲಭ್ಯವಿಲ್ಲ, ಗ್ರಾಮೀಣ ಭಾಗಗಳಿಗೆ ರಸ್ತೆ-ಬಸ್ ವ್ಯವಸ್ಥೆ ಇಲ್ಲ, ಹೀಗೆ ಹತ್ತಾರು ಸಮಸ್ಯೆಗಳು ವಿದ್ಯಾರ್ಥಿಗಳು ಶಿಕ್ಷಣದಿಂದ ದೂರ ಉಳಿಯಲು ನೇರ ಕಾರಣವಾಗಿವೆ. ಸರ್ಕಾರಿ ಶಾಲೆಗಳನ್ನು ಹಂತ ಹಂತವಾಗಿ ಮುಚ್ಚುವ ದುಷ್ಟ ಯೋಜನೆಯು ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕತ್ತಲೆ ತರುತ್ತಿದೆ. ಶಿಕ್ಷಣದ ಹಕ್ಕು ಎಲ್ಲರಿಗೂ ಎನ್ನುವುದು ಸಂವಿಧಾನದ ಆಶಯ, ಆದರೆ ಸರ್ಕಾರ ಅದನ್ನು “ಹಣವಿದ್ದವರಿಗೆ ಮಾತ್ರ” ಎಂಬ ರೀತಿಗೆ ತರುತ್ತಿದೆ. ಭಾರತ ವಿದ್ಯಾರ್ಥಿ ಫೆಡರೇಶನ್ ಸಂಘಟನೆಯನ್ನು ಜಿಲ್ಲಾಧ್ಯಂತ ವಿಸ್ತರಿಸಿ, ಜಿಲ್ಲೆಯಲ್ಲಿರುವ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸಿ ಅನ್ಯಾಯದ ವಿರುದ್ಧ ವಿದ್ಯಾರ್ಥಿಗಳ ಧ್ವನಿಯಾಗಿ ಎಸ್.ಎಫ್.ಐ. ನೂತನ ಜಿಲ್ಲಾ ಸಮಿತಿಯು ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.

ಗಂಗಾವತಿಯ ಡಾ. ಚನ್ನಬಸವ ಕೊಟಗಿ ಅವರಿಗೆ ರಾಷ್ಟ್ರೀಯ ಸಾಧಕ ಪ್ರಶಸ್ತಿ

ಗಂಗಾವತಿ: ನಗರದ ನಿವಾಸಿಯಾದ ಚನ್ನಬಸವ ಕೊಟಗಿಯವರು ಒಬ್ಬ ವರದಿಗಾರರಾಗಿ ಮಾಧ್ಯಮ ಕ್ಷೇತ್ರದಲ್ಲಿ ಸುಮಾರು ೧೫ ವರ್ಷಗಳಿಂದ ಸೇವೆ ಸಲ್ಲಿಸಿರುವುದನ್ನು ಗುರುತಿಸಿ ಬೆಂಗಳೂರಿನ ಗ್ಲೋಬಲ್ ಎಂಟರ್‌ ಪ್ರೈಸಸ್‌ ವತಿಯಿಂದ ರಾಷ್ಟ್ರೀಯ ಸಾಧಕ ಪ್ರಶಸ್ತಿ-೨೦೨೫ ನೀಡಲಾಗುತ್ತಿದೆ ಎಂದು ಸಾರ್ವಜನಿಕ ಸಂಪರ್ಕ ಅಧಿಕಾರಿಯಾದ ಶಾಂತಾ ತಿಳಿಸಿದ್ದಾರೆ.

ಚನ್ನಬಸವ ಕೊಟಗಿಯವರು ಒಬ್ಬ ಕಲಾವಿದರಾಗಿ, ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಾ, ಐತಿಹಾಸಿಕ ಪ್ರೇಕ್ಷಣಿಯ ಸ್ಥಳಗಳಲ್ಲಿ ಪ್ರವಾಸಿಗರ ಮಾರ್ಗದರ್ಶಕರಾಗಿ, ಸಂಘಟಕರಾಗಿ, ಸಂಘ-ಸಂಸ್ಥೆಗಳ ಪ್ರತಿನಿಧಿಯಾಗಿ, ಗಣ್ಯವ್ಯಕ್ತಿಗಳ ಆಪ್ತ ಸಹಾಯಕರಾಗಿ ಹತ್ತಾರು ಸೇವೆಗಳನ್ನು ಸಲ್ಲಿಸುತ್ತಾ, ವಿವಿಧ ಖಾಸಗಿ ಟಿ.ವಿ ಚಾನೆಲ್‌ಗಳು ಹಾಗೂ ಪತ್ರಿಕೆಗಳಲ್ಲಿ ಕರ್ತವ್ಯನಿರ್ವಹಿಸಿ, ಪ್ರಸ್ತುತ ಭಾರತ ಸರ್ಕಾರದ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರೊಡಕ್ಷನ್ ಅಸಿಸ್ಟೆಂಟ್ ಹಾಗೂ ಭಾರತೀಯ ಜೀವ ವಿಮಾ ನಿಗಮದ ಏಜೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಇತ್ತೀಚೆಗೆ ಹರಿಯಾಣ ರಾಜ್ಯದ ಫರಿದಾಬಾದ್‌ನ ಮ್ಯಾಜಿಕ್ & ಆರ್ಟ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಇವರ ಈ ಸಾಧನೆಯನ್ನು ಗುರುತಿಸಿದ ಬೆಂಗಳೂರಿನ ಗ್ಲೋಬಲ್ ಎಂಟರ್‌ ಪ್ರೈಸಸ್‌ ರವರು ಇವರಿಗೆ ಅಕ್ಟೋಬರ್-೧೩ ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಟೌನ್‌ಹಾಲ್‌ನಲ್ಲಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.

ಇವರಿಗೆ ಕರ್ನಾಟಕ ರಾಜ್ಯದ ಸಮಸ್ತ ನಾಗರಿಕರು, ಕಲಾವಿದರು, ಪತ್ರಕರ್ತರು, ಸಾಹಿತಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಗೊರೂರು ಅನಂತರಾಜು ಅವರಿಗೆ ಲೇಖಿಕಾ ಶ್ರೀ 2025 ಪ್ರಶಸ್ತಿ

ಬೆಂಗಳೂರಿನ ಲೇಖಿಕಾ ಸಾಹಿತ್ಯ ವೇದಿಕೆಗೆ 25 ವರ್ಷ ತುಂಬಿದ ಪ್ರಯುಕ್ತ ವೇದಿಕೆಯು ತನ್ನ 25ನೇ ವಾರ್ಷಿಕೋತ್ಸವ ರಜತ ಮಹೋತ್ಸವ ಲೇಖಿಕಾ ಸಾಹಿತ್ಯ ಸಂಭ್ರಮದ ಅಂಗವಾಗಿ 25 ಸಾಧಕರಿಗೆ ಲೇಖಿಕಾ ಶ್ರೀ 2025 ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಪ್ರಶಸ್ತಿ ಫಲಕ, ಸ್ಮರಣಿಕೆ, ಶಾಲು, ಫಲ ತಾಂಬೂಲಗಳನ್ನು ನವೆಂಬರ್ 9ರ ಭಾನುವಾರ ಹಾಸನದ ಎವಿಕೆ ಕಾಲೇಜು ಸಭಾಂಗಣದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ಲೇಖಿಕಾ ಸಾಹಿತ್ಯ ವೇದಿಕೆಯ ಸಂಚಾಲಕರಾದ ಶ್ರೀಮತಿ ಶೈಲಜಾ ಸುರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಶಸ್ತಿ ಪುರಸ್ಕೃತರು: ಗೊರೂರು ಅನಂತರಾಜು (ಹಾಸನ), ಡಾ. ವೀಣಾ ( ಸುಳ್ಯ), ಲೀಲಾವತಿ (ಹಾಸನ), ಪದ್ಮ ಆನಂದ್ (ಮೈಸೂರು) ದೀಪಿಕಾ ಚಾಟಿ (ಬೆಳಗಾವಿ), ರಾಧಾ ಟೇಕಲ್ (ಬೆಂಗಳೂರು), ಉಷಾ ನರಸಿಂಹನ್ (ಮೈಸೂರು), ಉದಯರವಿ (ಹಾಸನ), ಕೆ. ಎಂ. ಲೋಲಾಕ್ಷಿ (ಮೈಸೂರು), ಕೃಷ್ಣ ಪದಕಿ (ಶಿರಸಿ), ವಿದ್ಯಾ ಶಿರಹಟ್ಟಿ (ಧಾರಾವಾಡ ), ಗಣೇಶ ಅಮೀನಗಡ (ಮೈಸೂರು) ಯಶೋಧಾ ಡಿ (ಬೆಂಗಳೂರು), ಎನ್.ಎಲ್. ಚನ್ನೇಗೌಡ (ಹಾಸನ), ಸುಮಾ ವೀಣಾ (ಹಾಸನ), ರೂಪಾ ಜೋಶಿ (ಹುಬ್ಬಳ್ಳಿ), ಮುಕುಂದ ಗಂಗೂರ್ (ಹೊಸಪೇಟೆ), ನಾಗಲಕ್ಷ್ಮಿ ಎಂ.ಜೆ. (ಚಿಕ್ಕಮಗಳೂರು), ಡಾ. ಕರುಣಾ ಲಕ್ಷ್ಮಿ (ಮೈಸೂರು), ದಮಯಂತಿ ನರೇಗಲ್ (ಧಾರವಾಡ ), ಮಧುರಾ ಕರ್ಣಂ (ಬೆಳಗಾವಿ), ಭಾಗಿರಥಿ ಹೆಗಡೆ (ಶಿರಸಿ), ಸುಕನ್ಯಾ ಮುಕುಂದ್ (ಹಾಸನ), ಪ್ರಭಾ ದಿನಮಣಿ (ಹಾಸನ).

ಶ್ರೀ ಶಾರದಾ ಶರನ್ನ ನವರಾತ್ರಿ. ಚಂಡಿ ಹವನ ಸಂಪನ್ನ

ಗಂಗಾವತಿ. ನಗರದ ಶಂಕರಮಠದ ಶ್ರೀ ಶಾರದಾದೇ ಗುಳದಲ್ಲಿ ಬುಧವಾರ ರಂದು ನವ ಚಂಡಿ ಹವನ ಸಂಪನ್ನಗೊಂಡಿತು. ವೇದಮೂರ್ತಿ ಮಹೇಶ್ ಭಟ್ ಜೋಶಿ ಹಾಗೂ ತಂಡ ದವರಿಂದ ಸೇವಾಕರ್ತರಿಗೆ ಮಹಾಸಂಕಲ್ಪ ಹಾಗೂ ವೈದ್ಯ ನೇತೃತ್ವದಲ್ಲಿ ಪೂರ್ಣಾಹುತಿಯನ್ನು ಸಂಪನ್ನಗೊಳಿಸಲಾಯಿತು.

ಈ ಸಂದರ್ಭದಲ್ಲಿ ಧರ್ಮದರ್ಶಿ ನಾರಾಯಣರಾವ್ ವೈದ್ಯ ಮಾತನಾಡಿ ಶೃಂಗೇರಿಯ ಜಗದ್ಗುರು ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ 75ನೇ ವರ್ಧಂತಿ ಮಹೋತ್ಸವ ಸಂಭ್ರಮಾಚರಣೆಯ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ ನವಚಂಡಿ ಹವನವನ್ನು ಆಯೋಜಿಸಲಾಗಿದ್ದು. ಇದರೊಂದಿಗೆ ದಂಪತಿ ಪೂಜೆ ಹಾಗೂ ಕನ್ನಿಕಾ ಪೂಜೆಯನ್ನು ಭಕ್ತರಿಂದ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ವಿದ್ಯಾ ತೀರ್ಥ ನಾರ್ವೆ ದಂಪತಿಗಳು, ಪವನ್ ಕುಮಾರ್, ಕಾರ್ತಿಕ್ ದಂಪತಿಗಳು ನೇತೃತ್ವ ವಹಿಸಿದ್ದರು. ಸುಮಾರು 600ಕ್ಕೂ ಅಧಿಕ ಭಕ್ತಾದಿಗಳು ವಿವಿಧ ಸಮಾಜದ ಮುಖಂಡರು ಅಮ್ಮನವರ ದರ್ಶನ ಪಡೆದು ಪುನೀತರಾದರು. ಬಳಿಕ ಅನ್ನ ಸಂತರ್ಪಣೆ ನಡೆಸಲಾಯಿತು

ಬನ್ನಿಯಿಂದ ಬಂಗಾರದ ಜೀವನ ನಡೆಸೋಣ: ಪೂಜ್ಯ ಪದ್ಮಾಕ್ಷರಯ್ಯ ಮಹಾಸ್ವಾಮಿಗಳು..

ಎಲ್ಲರ ಸಹಕಾರದಿಂದ ಶರನ್ನನವರಾತ್ರಿ ಕಾರ್ಯಕ್ರಮ ಯಶಸ್ವಿ: ಅಧ್ಯಕ್ಷರು ದರೋಜಿ ನಾಗರಾಜ ಶ್ರೇಷ್ಠಿ.ಗಂಗಾವತಿ: ನಗರದ ಹಿರೇಜಂತಗಲ್ ವಿರುಪಾಪುರದಲ್ಲಿರುವ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಸೆಪ್ಟಂಬರ್ 22ನೇ ತಾರೀಖಿನಿಂದ ಅಕ್ಟೋಬರ್ 1ನೇ ತಾರೀಖಿನವರೆಗೆ ನಡೆದ ಶರನ್ ನವರಾತ್ರಿಯ ಪುರಾಣವು ದೇವಸ್ಥಾನದ ಶ್ರೀ ವಾಸವಿ ವೇದಿಕೆಯಲ್ಲಿ ಹತ್ತು ದಿನಗಳವರೆಗೆ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪುರಾಣದ ಸಾನಿಧ್ಯವನ್ನು ವಹಿಸಿದ ಪರಮ ಪೂಜ್ಯಶ್ರೀ ಪದ್ಮಾಕ್ಷರಯ್ಯ ಮಹಾಸ್ವಾಮಿಗಳು ಸುಳೆಕಲ್ ಅವರು ಮಾತನಾಡಿ ಶರನ್ ನವರಾತ್ರಿಯ ಒಂದೊಂದು ದೇವಿಯ ಅವತಾರವು ಪುರಾಣದಲ್ಲಿ ತಿಳಿಸಲಾಯಿತು.

ಈ ಪುರಾಣದಲ್ಲಿ ಸಮಾಜ ಬಾಂಧವರು ಭಾಗವಹಿಸಿ ಪ್ರತಿದಿನವೂ ದೇವಿಗೆ ಕುಂಕುಮಾರ್ಚನೆ, ಲಲಿತ ಸಹಸ್ರನಾಮಾವಳಿ, ಪುರಾಣ ಪ್ರವಚನ ಸಂಗೀತ, ಭಜನಾ ಕಾರ್ಯಕ್ರಮ ಸೇರಿದಂತೆ ಪ್ರತಿನಿತ್ಯವೂ ಸಮಾಜದ ಅಧ್ಯಕ್ಷರ ನೇತೃತ್ವದಲ್ಲಿ ನೆರವೇರಿಸಲಾಗಿದೆ ಎಲ್ಲರಿಗೂ ಶ್ರೀದೇವಿ ಕನ್ನಿಕಾಪರಮೇಶ್ವರಿ ಆಶೀರ್ವದಿಸಲಿ ಜೊತೆಗೆ ಮಹಾನಮಿ ದಿನದಂದು ಬನ್ನಿಯನ್ನು ತೆಗೆದುಕೊಂಡು ನಮ್ಮ ಜೀವನವನ್ನು ಬಂಗಾರ ಮಾಡಿಕೊಳ್ಳೋಣ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಆರ್ಯವೈಶ್ಯ ಸಮಾಜದ ಅಧ್ಯಕ್ಷರಾದ ದರೋಜಿ ನಾಗರಾಜ ಶ್ರೇಷ್ಠಿ ಮಾತನಾಡಿ ದೇವಸ್ಥಾನದಲ್ಲಿ ಶರನ್‌ ನವರಾತ್ರಿ ಮುಗಿಯುವರೆಗೂ ಪ್ರತಿನಿತ್ಯವೂ ನಮ್ಮ ಸಮಾಜದ ಬಾಂಧವರು ಸಹಕಾರ ನೀಡಿದ್ದಾರೆ. ವಿಶೇಷವಾಗಿ ಮಹಿಳೆಯರು ದಿನನಿತ್ಯವು ಪುರಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆ ತಾಯಿ ಕನ್ನಿಕಾಪರಮೇಶ್ವರಿ ಕೃಪೆಗೆ ಪಾತ್ರರಾಗಿದ್ದರೆ ಮತ್ತು ದಿನನಿತ್ಯವೂ ಮಹಾಪ್ರಸಾದ ವ್ಯವಸ್ಥೆಯನ್ನು ಮಾಡಿದಂತ ವ್ಯವಸ್ಥಾಪಕರಿಗೂ ನವ ಬೃಂದಾವನ ಭಜನಾ ಮಂಡಳಿಯವರಿಗೂ ಶ್ರೀವಾಸವಿ ಮಹಿಳಾ ಮಂಡಳಿಯವರಿಗೂ ಎಲ್ಲರಿಗೂ ಧನ್ಯವಾದ ಎಂದು ಹೇಳಿದರು.

ಈ ಸಂದರ್ಭದಲ್ಲಿ ನವ ಬೃಂದಾವನ ಭಜನಾ ಮಂಡಳಿ ಅಧ್ಯಕ್ಷರು ದರೋಜಿ ನರಸಿಂಹ ಶ್ರೇಷ್ಠಿ, ಶ್ರೀ ವಾಸವಿ ಯುವಜನ ಸಂಘದ ಅಧ್ಯಕ್ಷ ಎನ್.ವಿ ಮಂಜುನಾಥ, ಗೌರವಾಧ್ಯಕ್ಷ ದರೋಜಿ ವೆಂಕಟೇಶ, ಶ್ರೀ ವಾಸವಿ ಮಹಿಳಾ ಮಂಡಳಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸೇರಿದಂತೆ ದಮ್ಮೂರು ರಾಜಕುಮಾರ, ಸಿರಿಗೇರಿ ಬಾಲಚಂದ್ರಯ್ಯ, ಮಲ್ಲಿಕಾರ್ಜುನ ಪ್ರಿನ್ಸಿಪಾಲರು ವಿದ್ಯಾನಿಕೇತನ ಕಾಲೇಜ್, ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ರುಕ್ಮಿಣಿ, ಶ್ರೀಮತಿ ಪದ್ಮಾವತಿ, ಶ್ರೀಮತಿ ರಾಧಿಕಾ, ಶ್ರೀಮತಿ ಉಷಾರಾಣಿ, ವಾಸವಿ ಭಜನಾ ಮಂಡಳಿ ಅಧ್ಯಕ್ಷರಾದ ಶ್ರೀಮತಿ ದಮ್ಮೂರು ಮಂಜುಳ, ಶ್ರೀಮತಿ ಎಂ.ಪಿ ಸುಮಲತಾ ಸೇರಿದಂತೆ ಸಮಾಜದ ಅಪಾರ ಮುಖಂಡರು ಹಿರಿಯರ ನೇತೃತ್ವದಲ್ಲಿ ಶರನ್‌ ನವರಾತ್ರಿಯ ಕೊನೆಯ ದಿನವನ್ನು ಮಹಾಮಂಗಳಾರತಿಯೊಂದಿಗೆ ಸಂಪನ್ನಗೊಳಿಸಲಾಯಿತು.

VISHWAROOPA NEWS BLOG

Infinite

Skip to content ↓