ದ್ವಿತೀಯ ಪಿ.ಯು ಪರೀಕ್ಷೆಯಲ್ಲಿ ಗಂಗಾವತಿಯ ಸಂಕಲ್ಪ ಪಿಯು ಕಾಲೇಜಿನ ಶೇ. 76ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ
ಗಂಗಾವತಿ: ಏಪ್ರಿಲ್-08 ಮಂಗಳವಾರ ಪ್ರಕಟವಾದ ದ್ವಿತಿಯ ಪಿಯುಸಿ ಫಲಿತಾಂಶದಲ್ಲಿ ನಗರದ ಸಂಕಲ್ಪ ಸ್ವತಂತ್ರ ಪದವಿ ಪೂರ್ವ ಕಾಲೇಜಿಗೆ ಶೇ.76ರಷ್ಟು ಫಲಿತಾಂಶ ಬಂದಿದ್ದು, ಕಲಾ ವಿಭಾಗದಲ್ಲಿ ಜಂಬಣ್ಣ ಎಂಬ ವಿದ್ಯಾರ್ಥಿ, ವಾಣಿಜ್ಯ ವಿಭಾಗದಲ್ಲಿ ಐಶ್ವರ್ಯ ಎಂಬ ವಿದ್ಯಾರ್ಥಿನಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಕಲಾ ವಿಭಾಗದಲ್ಲಿ ಜಂಬಣ್ಣ ಮಾರೆಪ್ಪ ವಿಭೂತಿ ಶೇ.94.66ರಷ್ಟು (568ಅಂಕ), ದುರುಗೇಶ ಜಂಬಣ್ಣ ವಿಭೂತಿ ಶೇ.93.33 ರಷ್ಟು (560ಅಂಕ) ಹಾಗೂ ಹುಲಿಗೆಮ್ಮ ಕುರಿ ವೆಂಕಟೇಶ ಶೇ. 93. ರಷ್ಟು (558) ಅಂಕ ಪಡೆದುಕೊಂಡಿರುತ್ತಾರೆ. ಅದೇರೀತಿ ವಾಣಿಜ್ಯ…
